HomeGadag Newsಹಂದಿಗಳ ನಿಯಂತ್ರಣಕ್ಕೆ ಮನವಿ

ಹಂದಿಗಳ ನಿಯಂತ್ರಣಕ್ಕೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆದರಳ್ಳಿ ಗ್ರಾಮದಲ್ಲಿ ಬೀಡಾಡಿ ದನ-ಕರುಗಳು ಹಾಗೂ ಹಂದಿಗಳಿಂದ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದ ಆದರಹಳ್ಳಿ ಗ್ರಾಮವನ್ನು ಮುಕ್ತಗೊಳಿಸಬೇಕು ಎಂದು ಅಲ್ಲಿನ ಕೆಲ ನಿವಾಸಿಗಳು ತಹಸೀಲ್ದಾರ ಧನಂಜಯ ಎಂ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮದ ನಿವಾಸಿಗಳು, ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ 4-5 ವರ್ಷಗಳಿಂದ ದನ-ಕರುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಗ್ರಾಮದಲ್ಲಿ ನೂರಾರು ಹಂದಿಗಳನ್ನು ತಂದು ಬಿಟ್ಟು ಹೋಗಿದ್ದಾರೆ. ಇದರಿಂದ ಅನೇಕ ಅವಘಡಗಳು ಸಂಭವಿಸುತ್ತಿದ್ದು, ದನಕರುಗಳನ್ನು ಬೀದಿಗೆ ಬಿಡುವದರಿಂದ ಹೊಲದಲ್ಲಿ ಬೆಳೆಗಳು ಹಾಳಾಗುತ್ತಿದೆ. ಹಂದಿಗಳ ಕಾಟದಿಂದ ತಿಪ್ಪೆಗಳು ಹಾಗೂ ದನಕರುಗಳಿಗಾಗಿ ಸಂಗ್ರಹಿಸಿದ ಹೊಟ್ಟು, ಮೇವುಗಳ ಬಣವಿಗಳು ಹಾಳಾಗುತ್ತಿದೆ. ಈ ದನಕರುಗಳ ಮಾಲಕರಿಗೆ ಮತ್ತು ಹಂದಿ ಮಾಲಕರಿಗೆ ತಿಳಿಸಿ ಅವುಗಳನ್ನು ಬೇರೆಡೆ ಸಾಗಿಸುವಂತೆ ಕ್ರಮ ವಹಿಸಿ ಇವುಗಳ ಉಪಟಳವನ್ನು ತಡೆಯಬೇಕು ಎಂದು ವಿನಂತಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಿಪ್ಪಣ್ಣ ಲಮಾಣಿ, ಶಂಕರಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಮಂಜಪ್ಪ ಹೆಸರೂರ, ನೀಲಪ್ಪ ತಳವಾರ, ಮಹಾಂತಗೌಡ ಪಾಟೀಲ, ಮಮ್ಮಿಸಾಬ ವಾಲಿಕಾರ, ಚನ್ನಪ್ಪ ಲಮಾಣಿ, ಮಂಜುನಾಥ ರಾಹೂತ್, ಗುಡದಪ್ಪ ಅಂಬಿಗೇರ, ಮಲ್ಲಿಕಸಾಬ ವಾಲಿಕಾರ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!