ಚಂದ್ರಕಾಂತ ಬೆಲ್ಲದ ಪರ ಮತ ಯಾಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೆöÊವಾರ್ಷಿಕ ಚುನಾವಣೆಯು ಮೇ 25ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಂದ್ರಕಾಂತ ಬೆಲ್ಲದ ಮತ್ತು ಮಕ್ಕಳು ಹಾಗೂ ಮಹರ್ಷಿ ಶಂಕರ ಹಲಗತ್ತಿ ಅವರ ತಂಡವು ಗದಗ ನಗರಕ್ಕೆ ಆಗಮಿಸಿ ಸದಸ್ಯರಲ್ಲಿ ಮತಯಾಚನೆ ಮಾಡಿದರು.

Advertisement

ಪ್ರಧಾನ ಕಾರ್ಯದರ್ಶಿ, ಸ್ಥಾನದ ಅಭ್ಯರ್ಥಿ ಶಂಕರ ಹಲಗತ್ತಿ, ವೀರಣ್ಣ ಒಡ್ಡಿನ, ಡಾ. ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ ಅವರ ತಂಡವು ಪಂಚಾಕ್ಷರ ಗವಾಯಿಗಳ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮೂರು ವರ್ಷಗಳ ಅವಧಿಯಲ್ಲಿ ಕೈಗೊಂಡಿದ್ದ ಕಾರ್ಯಗಳ ಕುರಿತು ವಿವರಿಸಿದರಲ್ಲದೆ ತಮ್ಮ ಮತಗಳಲ್ಲದೆ ಇತರ ಸದಸ್ಯರ ಮತಗಳನ್ನು ಚಂದ್ರಕಾಂತ ಬೆಲ್ಲದ ಅವರ ಗುಂಪಿಗೆ ಹಾಕಿಸುವ ಮೂಲಕ ಗುಂಪಿನ ಎಲ್ಲ 15 ಸದಸ್ಯರನ್ನೂ ಬೆಂಬಲಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಪಿಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜಶೇಖರ ದಾನರಡ್ಡಿ, ಪ್ರೊ. ಬಸವರಾಜ ಪೂಜಾರ್, ಪ್ರೊ. ಬಾಹುಬಲಿ ಜೈನರ, ನಿವೃತ್ತ ಪ್ರಾಚಾರ್ಯರಾದ ವಿ.ಎಂ. ಗುರುಮಠ, ಡಾ. ಪ್ರಭು ಗಂಜಿಹಾಳ ಮೊದಲಾದವರಿದ್ದರು.


Spread the love

LEAVE A REPLY

Please enter your comment!
Please enter your name here