ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಂತೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ನಿಯಮ ಮೀರಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾರಣ ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರವೇ ಪ್ರವೀಣಶೆಟ್ಟಿ ಬಣದ ನಗರ ಘಟಕ ಅಧ್ಯಕ್ಷ ಶ್ರೇಯಾಂಕ ಹಿರೇಮಠ್ ಹಾಗೂ ತಾಲೂಕಾ ಪ್ರ. ಕಾರ್ಯದರ್ಶಿ ಅಂಬರೀಶ ಗಾಂಜಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶ್ರೇಯಾಂಕ ಹಿರೇಮಠ, ಅಂಬರೀಶ ಗಾಂಜಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕಿರಾಣಿ ಹಾಗೂ ಪಾನ್ ಶಾಪ್‌ಗಳಲ್ಲಿ ಮಾರಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಅಬಕಾರಿ ಆಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪೊಲೀಸ್ ಇಲಾಖೆಯಾದರೂ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಈಶ್ವರ ಗೌಡ್ ಪಾಟೀಲ, ಪ್ರವೀಣ ದಸಮನಿ, ವೀರೇಶ ಹಗ್ಗರದ, ಅರ್ಜುನ್ ಬಾಂಡಗೆ, ಮುಖೇಶ ದುಮಖಾತಿ, ಪ್ರಜ್ವಲ್ ಗಾಂಜಿ, ಚಂದ್ರಶೇಖರ್ ಬಾರ್ಕಿ, ಕಿರಣ ಗುಡಗೇರಿ, ಸಂತು ಗೋಸಾವಿ ಕಿಶನ್ ಗೋಸಾವಿ, ಗುರು ಲಾಳಿ, ಪ್ರಸನ್ ಅರಳಿ, ರೋಹಿತ್ ಗೋಸಾವಿ, ಶ್ರೀನಿವಾಸ್ ಗೋಸಾವಿ, ಆಕಾಶ್ ಗೋಸಾವಿ, ಪ್ರಸನ್ ಹಿರೇಮಠ, ಪವನ್ ಗೋಸಾವಿ, ರಾಜ ಗೋಸಾವಿ, ಗೋಪಿನಾಥ ಗೋಸಾವಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here