ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ನಂದೀಶ್ವರ ನಗರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಗದಗ ನಂದೀಶ್ವರ ನಗರದ 2 ಮತ್ತು 3ನೇ ಕ್ರಾಸ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

Advertisement

3ನೇ ಕ್ರಾಸ್‌ನ ರಸ್ತೆ ಹಾಳಾಗಿದ್ದು, ಸಂಚರಿಸಲು ಬಾರದಂತಾಗಿದೆ. ಈ ರಸ್ತೆಯನ್ನು ತ್ವರಿತವಾಗಿ ಸಿ.ಸಿ ರಸ್ತೆಯನ್ನಾಗಿ ಮಾಡಬೇಕು. ನಂದೀಶ್ವರ ನಗರಕ್ಕೆ ಸುಂದರವಾದ ಉದ್ಯಾನವ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಚರಂಡಿ ನೀರು ರಸ್ತೆಯಲ್ಲೇ ಹರಿಯುವದರಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ದುರ್ವಾಸನೆ ಬರುತ್ತಿದ್ದು, ನಿವಾರಣೆಗೆ ಸೂಕ್ತ ಕ್ರಮ ಕೈಗಳ್ಳಬೇಕು.

ಶಾಲೆ ಹಾಗೂ ದೇವಸ್ಥಾನ ಇರುವ ವಸತಿ ಪ್ರದೇಶದಲ್ಲಿ ಬಾರ್ ಆರಂಭವಾಗಿದ್ದು, ಇದನ್ನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸಂಬAಧಿಸಿದವರಿಗೆ ಸೂಚನೆ ನೀಡಿ ತುರ್ತು ಕ್ರಮ ಜರುಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜಿ.ಎಸ್. ಹಿರೇಮಠ, ಅಧ್ಯಕ್ಷ ವಿಶ್ವನಾಥ ಗದ್ದಿಕೇರಿ, ಗೌರವ ಕಾರ್ಯದರ್ಶಿ ಬಿ.ಹೆಚ್. ಕೊರ್ಲಹಳ್ಳಿ, ಉಪಾಧ್ಯಕ್ಷ ಶಿವಾನಂದ ಪಲ್ಲೇದ, ಜೆ.ವ್ಹಿ. ಹಿರೇಮಠ, ಕೋಶಾಧ್ಯಕ್ಷ ಆರ್.ವ್ಹಿ. ಕರವೀರಮಠ, ಸಹ ಕಾರ್ಯದರ್ಶಿ ಕೆ.ವ್ಹಿ. ಯಾಳಗಿಶೆಟ್ರು, ಸಂಘಟನಾ ಕಾರ್ಯದರ್ಶಿ ಲಿಂಗರಾಜ ಗೊಲ್ಲರ, ಡಾ. ರವೀಂದ್ರ ನಂದಿ, ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ, ವ್ಹಿ.ಎಸ್. ಶಿವಕಾಳಿಮಠ, ಮಂಜುನಾಥ ಗಜಕೋಶ, ಬಿ.ಬಿ. ಬಾವಿಕಟ್ಟಿ, ವ್ಹಿ.ವ್ಹಿ. ಮುನವಳ್ಳಿ, ಎಸ್.ಡಿ. ರಾಠೋಡ, ಶ್ರೀನಿವಾಸ ದಿವಗಿಹಳ್ಳಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here