ವಿಜಯಸಾಕ್ಷಿ ಸುದ್ದಿ, ಡಂಬಳ: ದೆಹಲಿಯ ಮ್ಯಾಜಿಕ್ ಬುಕ್ ಆಪ್ ರೆಕಾರ್ಡ್ ಮತ್ತು ಕಲಾ ವಿಶ್ವವಿದ್ಯಾಲಯದ ವತಿಯಿಂದ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಡಂಬಳ ಗ್ರಾಮದ ರೈತ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಅವರಿಗೆ ಡಾ. ಸಿ.ಪಿ.ಯಾದವ ಅಧ್ಯಕ್ಷತೆಯಲ್ಲಿ ಮತ್ತು ಸುಪ್ರೀಂ ಕೋರ್ಟ್ನ ನ್ಯಾಯವಾದಿ ಅಂತಾರಾಷ್ಟ್ರೀಯ ಹ್ಯೂಮನ್ ರೈಟ್ಸ್ ಫೌಂಡೇಷನ್ನ ಡಾ.ರಾಮ ಅವತಾರ ಶರ್ಮ ಅವರು `ಅತ್ಯುತ್ತಮ ಸಾಧಕ’ ಪ್ರಶಸ್ತಿ ಪ್ರದಾನ ಮಾಡಿದರು.
Advertisement
ಈ ಸಂದರ್ಭದಲ್ಲಿ ದೆಹಲಿ ಪೊಲೀಸ್ ಅಧಿಕಾರಿ ಕಿರಣ್ ಸೇಥಿ, ಸ್ವಯಂ ರಕ್ಷಣಾ ತರಬೇತಿಯ ಮುಖ್ಯ ತರಬೇತುದಾರ ಶಿವಕುಮಾರ್ ಕೊಹ್ಲಿ, ಪ್ರಸಿದ್ಧ ನಟ ಮತ್ತು ನಿರ್ದೇಶಕ ಡಾ. ಗಾಣಗಲ್ಲ ವಿಜಯ್ ಕುಮಾರ್, ಡಂಬಳ ಗ್ರಾಮದ ಸನ್ನಿಂಗಪ್ಪ ಗೋವಿನಕೊಪ್ಪ, ಮಲ್ಲಪ್ಪ ಮಠದ, ವರ್ತಮಾನಗೌಡ ಪಾಟೀಲ್, ಸಣ್ಣಯಲ್ಲಪ್ಪ ಉಪ್ಪಾರ ಇದ್ದರು. ಡಂಬಳ ಗ್ರಾಮದ ರೈತರು, ಹಿರಿಯರು ಮಂಜಯ್ಯಸ್ವಾಮಿ ಅರವಟಗಿಮಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.