‘ಶಿವರಾಜ್‌ ಕುಮಾರ್-ದರ್ಶನ್​ ಸರ್‌ ಬಳಿ ಕ್ಷಮೆ ಕೇಳು’: ಮಡೆನೂರು ಮನುಗೆ ನಟ ಧ್ರುವ ಸರ್ಜಾ ಸಲಹೆ

0
Spread the love

ಅತ್ಯಾಚಾರ ಪ್ರಕರಣದಲ್ಲಿ ನಟ ಮಡೆನೂರು ಮನು ಜೈಲು ಸೇರಿ ಬಂದಿದ್ದಾರೆ. ಈ ಹಿಂದೆ ಮನು ನಟ ಶಿವರಾಜ್‌ ಕುಮಾರ್‌ ಹಾಗೂ ದರ್ಶನ್‌ ಬಗ್ಗೆ ಆಡಿದ ಮಾತುಗಳು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿಂದೆ ಆ ಆಡಿಯೋ ತನ್ನದಲ್ಲ ಎಂದು ವಾದಿಸಿದ್ದ ಮನು ಇದೀಗ ಪರೋಕ್ಷವಾಗಿ ತಮ್ಮದೇ ಆಡಿಯೋ ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಧ್ರುವ ಸರ್ಜಾ ಅವರು ಶಿವಣ್ಣ ಹಾಗೂ ದರ್ಶನ್‌ ಅವರ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದಾರೆ.

Advertisement

ಧ್ರುವ ಸರ್ಜಾ ಜೊತೆ ವಾಟ್ಸಾಪ್​​ನಲ್ಲಿ ಮಡೆನೂರು ಮನು ಚಾಟ್ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಧ್ರುವ ಅವರಿಗೆ ಆಡಿಯೋ ಸಂದೇಶ ಕಳುಹಿಸಿದ್ದು, ‘ನನ್ನ ಕರಿಯರ್ ಮೇಲೆ ಆಣೆ ಮಾಡಿ ಹೇಳುತ್ತೇನೆ. ಉದ್ದೇಶ ಪೂರ್ವಕವಾಗಿ ನಾನು ಹಾಗೆ ಮಾತನಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ. ಒಳ್ಳೆಯ ಸಿನಿಮಾನ ಕೊಂದುಬಿಟ್ಟರು. ಕಲೆ ನಂಬಿ ಬಂದಿದ್ದೇನೆ. ಇಂಡಸ್ಟ್ರಿಯಿಂದ ಬ್ಯಾನ್ ಎಂದು ಹೇಳುತ್ತಿದ್ದಾರೆ. ಒಂದು ಅವಕಾಶ ಕೊಡಿ ಧ್ರುವ ಅಣ್ಣ’ ಎಂದು ಮಡೆನೂರು ಮನು ಮನವಿ ಮಾಡಿದ್ದಾರೆ.

‘ನಾನು ಬದಲಾಗ್ತೀನಿ. ಬದಲಾಗಲು ಅವಕಾಶ ಮಾಡಿಕೊಡಿ. ಜೈಲಿನಿಂದ ಹೊರ ಬಂದ ಬಳಿಕ ಖಿನ್ನೆತೆಗೆ ಒಳಗಾಗಿದ್ದೆ. ನೀವು ಎಲ್ಲಿ ಸಿಕ್ಕರೂ ಬಂದು ಕ್ಷಮೆ ಕೇಳುತ್ತೇನೆ. ಆಶೀರ್ವಾದ ಪಡೆದುಕೊಳ್ಳುತ್ತೇನೆ’ ಎಂದು ಕೂಡ ಮಡೆನೂರು ಮನು ಹೇಳಿದ್ದಾರೆ.

ನನ್ನ ಬಗ್ಗೆ ಯೋಚಿಸಬೇಡ. ಕುಟುಂಬ, ಮಕ್ಕಳ ಬಗ್ಗೆ ಕಾಳಜಿವಹಿಸು. ಶಿವಣ್ಣ ಹಾಗು ದರ್ಶನ್ ಸರ್​ಗೆ ಕರೆ ಮಾಡಿ ಮಾತನಾಡು. ಅವರುಗಳು ನಮ್ಮ ಸೀನಿಯರ್ಸ್’ ಎಂದು ಹೇಳಿದ್ದಾರೆ. ಈ ಮೂಲಕ ಮಡೆನೂರು ಮನು ಅವರನ್ನು ಧ್ರುವ ಕ್ಷಮಿಸಿದ್ದಾಗಿ ಪರೋಕ್ಷವಾಗಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here