HomeGadag Newsಅಟಲ್ ಬಿಹಾರಿ ವಾಜಪೇಯಿ ಬದಲಾವಣೆಯ ಹರಿಕಾರ: ಬಿಜೆಪಿ ಹಿರಿಯ ನಾಯಕ ಸೋಮಣ್ಣ ಡಾಣಗಲ್ಲ

ಅಟಲ್ ಬಿಹಾರಿ ವಾಜಪೇಯಿ ಬದಲಾವಣೆಯ ಹರಿಕಾರ: ಬಿಜೆಪಿ ಹಿರಿಯ ನಾಯಕ ಸೋಮಣ್ಣ ಡಾಣಗಲ್ಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಗ್ರಾಮದ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ನಂತರ ಅಟಲ್‌ಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಡ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸೋಮಣ್ಣ ಡಾಣಗಲ್ಲ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಬದಲಾವಣೆಗೆ ಕಾರಣರಾಗಿದ್ದಾರೆ. ಅವರು ಸಾಹಿತಿಗಳೂ ಆಗಿದ್ದರು. ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ಸಡಕ್ ಯೋಜನೆ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಹೀಗೆ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸಿದ್ದನ್ನು ಭಾರತೀಯರು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ವೈ. ಹುನಗುಂದ, ಕೃಷ್ಣ ಬಿದರಳ್ಳಿ, ಆನಂದ ತವರಿ, ನಿಂಗಪ್ಪ ದಾನಪ್ಪನವರ, ವೀರಣ್ಣ ಅಕ್ಕೂರ, ಶಂಭು ಹುನಗುಂದ, ಶಿವಾನಂದ ತಳವಾರ, ಗಿಡ್ಡಯ್ಯ ನಾವಿ, ಕೃಷ್ಣ ದಾಮೋದರ, ಶಂಕರ ಮಾಳಗಿ, ಸಿದ್ಧು ಪೂಜಾರ, ಮಂಜು ಬದಿ, ಸುನೀಲ್ ತೋಟದ, ಮಂಜುನಾಥ ದೇಸಾಯಿ, ಈರಣ್ಣ ಪುಟ್ಟಪ್ಪನವರ, ಎಂ.ಟಿ. ಬಡಿಗೇರ, ಮುನ್ನಾ ಶಿರಬಡಗಿ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!