ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ʼಗೆ ಮಸಿ ಬೆಳೆಯುವ ಪ್ರಯತ್ನ: ಕೆ.ಎನ್. ರಾಜಣ್ಣ

0
Spread the love

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್​ಗೆ ಮಸಿ ಬೆಳೆಯುವ ಪ್ರಯತ್ನವಾಗಿದೆ ಎಂದು  ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್​ಗೆ ಮಸಿ ಬೆಳೆಯುವ ಪ್ರಯತ್ನ. ಪಾದಯಾತ್ರೆ ಮಾಡುವ ಮೂಲಕ ಪ್ರತಿಪಕ್ಷಗಳು ಅಹಿಂದ ವರ್ಗದ ವಿರುದ್ಧ ಸಂಚು ಮತ್ತು ಪಿತೂರಿ ನಡೆಸುತ್ತಿವೆ.

Advertisement

ಯಾರು ವಿರೋಧ ಪಕ್ಷದಲ್ಲಿದ್ದಾರೋ ಅವರಿಂದಲೇ ಧಕ್ಕೆ ತರುವ ಪ್ರಯತ್ನ ಇದಾಗಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕ. ಪ್ರತಿಪಕ್ಷಗಳು ಪಾದಯಾತ್ರೆ ಮಾಡೋಕೆ ಹೋದರೆ ನಾವು ಸತ್ಯವನ್ನು ಜನಕ್ಕೆ ತಿಳಿಸಲು ನಮ್ಮಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಅವಹೇಳನ, ಮಸಿ ಬಳಿಯುವ ಕೆಲಸ ಮಾಡಿದರೆ ಅಹಿಂದ ವರ್ಗ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here