`ಯುವ ಜನೋತ್ಸವ’ದಲ್ಲಿ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಯುವಕರಲ್ಲಿ ಕಲಾಸಕ್ತಿ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ  ಪದವಿ ವಿದ್ಯಾರ್ಥಿಗಳಿಗೆ ಯುವಜನೋತ್ಸವವನ್ನು ಏರ್ಪಡಿಸುತ್ತಿದೆ. ಅದರಂತೆ ಪ್ರಸ್ತುತ ವರ್ಷ ವಲಯ ಮಟ್ಟದ ಯುವಜನೋತ್ಸವವನ್ನು ಆದರ್ಶ ಶಿಕ್ಷಣ ಸಮಿತಿಯ ಕಾಮರ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

Advertisement

ಈ ಸ್ಪರ್ಧೆಯಲ್ಲಿ ವಿಜಯ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ಹತ್ತು ವಿಭಾಗದಲ್ಲಿ ಭಾಗವಹಿಸಿ ಏಳು ವಿಭಾಗದಲ್ಲಿ ಪ್ರಶಸ್ತಿ ಗಳಿಸಿ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ನಡೆಯುವ ಯುವ ಜನೋತ್ಸವಕ್ಕೆ  ಆಯ್ಕೆಯಾಗಿದ್ದಾರೆ.

ಕೋಲಾಜ್ ಪೇಂಟಿAಗನಲ್ಲಿ ವೀರೇಶ ವಡ್ಡಟ್ಟಿಮಠ ದ್ವಿತೀಯ, ಸ್ಪಾಟ್ ಪೇಂಟಿAಗ್‌ನಲ್ಲಿ ಗಣೇಶ ಬದಿ ಪ್ರಥಮ, ರಂಗೋಲಿಯಲ್ಲಿ ಕಾರ್ತಿಕ್ ಬಡಿಗೇರ, ಪೋಸ್ಟರ್ ಮೇಕಿಂಗ್‌ನಲ್ಲಿ ಗಿರೀಶ ಸಿಳ್ಳಿ ಪ್ರಥಮ, ಕಾರ್ಟೂನ್ ಸ್ಪರ್ಧೆಯಲ್ಲಿ ಆಕಾಶ ಕೊಂಗಟಿ ತೃತೀಯ, ಸ್ಪಾಟ್ ಫೋಟೊಗ್ರಾಫಿ ದ್ವಿತಿಯ, ಇನ್ಸಾ÷್ಟಲೇಶನ್, ಬಸವರಾಜ ಗೌಡರ, ಆಕಾಶ, ಗಿರೀಶ, ಕಾರ್ತಿಕ್ ಭಾಗವಹಿಸಿ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ, ಕಾರ್ಯದರ್ಶಿ ಪ್ರೊ. ಸಂತೋಷ ಅಕ್ಕಿ, ಡಾ. ಸಿ.ವಿ. ಬಡಿಗೇರ, ಪ್ರೊ. ಎಸ್.ವಿ. ಗುಂಜಾಳ, ಬಿ.ಸಿ. ಕುತ್ನಿ, ಬಿ.ಜಿ. ನೆಲಜೇರಿ ಅಭಿನಂದಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here