ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ತಾಲೂಕು ಆಡಳಿತ ಸೌಧದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಸಮೀಕ್ಷೆ ಕಾರ್ಯದಲ್ಲಿ ಶೇ.100ರಷ್ಟು ಸಾಧನೆಗೈದವರಿಗೆ 2024-25ನೇ ಸಾಲಿನ ಅತ್ಯುತ್ತಮ (ಪಿ.ಆರ್.) ಬೆಳೆ ಸಮೀಕ್ಷೆಗಾರರು ಎಂದು ಚನ್ನಬಸಪ್ಪ ಸು. ಮೊರಬದ, ಮೃತ್ಯುಂಜಯ ಹುಡೇದ, ಮಹೇಶ ಗಂಜಾಳ ಹಾಗೂ ಚನ್ನಬಸಪ್ಪ ತೋಟದ ಅವರನ್ನು ತಾಲೂಕು ಆಡಳಿತದಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಜಿ.ಬಿ. ಮಜ್ಜಗಿ, ಸಹಾಯಕ ಕೃಷಿ ಅಧಿಕಾರಿ ಮಂಜುಳಾ ತೆಂಬದ, ಕೃಷಿ ಅಧಿಕಾರಿ ಮಂಜುಳಾ ಸುರಗೊಂಡ, ಕಂದಾಯ ನಿರೀಕ್ಷಕರಾದ ಬಿ.ಕೆ. ಸಂಶಿ, ಈರಣಗೌಡ ಐಯನಗೌಡರ, ಅಧಿಕಾರಿಗಳು ಉಪಸ್ಥಿತರಿದ್ದರು.