ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪ್ರತಿಷ್ಠತ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ಗುರುವಾರ ಗದಗ ನಗರದ ಎಸ್.ಎಮ್. ಕೃಷ್ಣಾ ನಗರದಲ್ಲಿ ಶಿಕ್ಷಣದ ಬಗ್ಗೆ ಅರಿವು ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಚಟುವಟಿಕೆಯ ಮೂಲಕ ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ಎನ್.ಎಸ್.ಎಸ್ ಸ್ವಯಂಸೇವಕರು ಸಾರ್ವಜನಿಕರ ಮನೆ ಮನೆಗೂ ಹೋಗಿ ಶಿಕ್ಷಣ ಎಂದರೆ ಏನು, ಶಿಕ್ಷಣದ ಮಹತ್ವ, ಶಿಕ್ಷಣ ಯಾಕೆ ಬೇಕು, ಶಿಕ್ಷಣದ ಶಕ್ತಿ, ಶಿಕ್ಷಣದಿಂದ ವ್ಯಕ್ತಿಯ ಬದಲಾವಣೆ, ಬೆಳೆವಣಿಗೆ ಇತ್ಯಾದಿ ಅರಿವನ್ನು ಸಾರ್ವಜನಿಕರಿಗೆ ತಲುಪಿಸಿದರು.
ಈ ಚಟುವಟಿಕೆಯಲ್ಲಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ನಾಯಕಿ ಸಾಕ್ಷಿ ಹೊಸಮಠ, ಎನ್.ಎಸ್.ಎಸ್ ಘಟಕದ 1ನೇ ತಂಡದ ನಾಯಕ ಮೌಲಾಲಿ ನದಾಫ, ನಾಯಕಿ ಪೂಜಾ ಬಂಡಿ ಮತ್ತು ಇನ್ನುಳಿದ ತಂಡಗಳ ನಾಯಕರುಗಳಾದ ಮೇಘಾ ಮುದ್ದಿ, ಪೂಜಾ ಮರಿಬಸಣ್ಣನವರ, ಆಕಾಶ ಕಳಗಣ್ಣನವರ, ನೀಲಮ್ಮ ಸಿತಾರಳ್ಳಿ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.₹