ಬೆಂಗಳೂರು;- ಇಂದು ಬೆಂಗಳೂರು ಸೇರಿ ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನಗರದ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯುತ್ತಿದ್ದು, ನಗರದ ಬನಶಂಕರಿ, ಸರ್ಕಲ್ ಮಾರಮ್ಮ , ಮಲ್ಲೇಶ್ವರಂ ನಾ ಗಂಗಾಬಿಕೆ ದೇವಸ್ತಾನ, ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
Advertisement
ಬೆಳ್ಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ಶುರುವಾಗಿದ್ದು, ಅದ್ರಲ್ಲೂ ಬನಶಂಕರಿ ದೇವಸ್ಥಾನದಲ್ಲಿ 5 ಗಂಟೆಯಿಂದಲೇ ಪೂಜೆ ಶುರುವಾಗಿದೆ. ಬೆಳ್ಳಗ್ಗೆಯೇ ಪಂಚಾಭಿಷೇಕ ಮಾಡಿ ವಿಷೇಶ ಅಲಂಕಾರದ ನಂತರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಹೀಗಾಗಿ ಬೆಳ್ಳಂಬೆಳ್ಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದಾರೆ.