ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಗಳ ವತಿಯಿಂದ ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾಗಿರುವ ದಿ. ಆಝಾದ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ್ನು `ಉತ್ತಮ ಸಹಕಾರಿ ಬ್ಯಾಂಕ್’ ಎಂದು ಗುರುತಿಸಿ ಗೌರವಿಸಿದೆ.
ಇತ್ತೀಚೆಗೆ ಹಾವೇರಿಯ ರಜನಿ ಸಭಾಂಗಣದಲ್ಲಿ ಜರುಗಿದ ಅಖಿಲ ಭಾರತ ಸಹಕಾರ ಸಪ್ತಾಹ-2025ರ ‘ಆತ್ಮ ನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಧ್ಯೇಯದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ಯಾಂಕ್ಗೆ ಗೌರವ ಸಲ್ಲಿಸಲಾಯಿತು.
ಆಝಾದ್ ಬ್ಯಾಂಕ್ನ ನಿರ್ದೇಶಕರಾದ ಆರ್.ಎಲ್. ಬಾಗಲಕೋಟಿ, ಎಂ.ಎ. ಹಣಗಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಗೌರವ ಸ್ವೀಕರಿಸಿದರು. ಆಝಾದ್ ಬ್ಯಾಂಕ್ಗೆ ಈ ಗೌರವವನ್ನು ನೀಡಿದ್ದಕ್ಕೆ ಇಲಾಖೆ, ಮಹಾಮಂಡಳಕ್ಕೆ ಬ್ಯಾಂಕ್ನ ಚೇರಮನ್ ಹಾಜಿ ಸರ್ಫರಾಜ್ಅಹ್ಮದ್ ಎಸ್.ಉಮಚಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.


