ಬಾಗಲಕೋಟೆ: ಡಿಸಿ ಕಚೇರಿ ಎದುರು ಪ್ರತ್ಯಕ್ಷವಾದ ಹಾವು – ಭಯಭೀತರಾದ ಜನ!

0
Spread the love

ಬಾಗಲಕೋಟೆ:- ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ಹಾವು ಕಾಣಿಸಿಕೊಂಡು ಕೆಲಹೊತ್ತು ಅಲ್ಲಿಯ ನೌಕರರನ್ನ ಭಯಭೀತಗೊಳಿಸಿದ್ದ ಘಟನೆ ಜರುಗಿದೆ.

Advertisement

ನೌಕರರು ಎಂದಿನಂತೆ ತಮ್ಮ ಕೆಲಸಕ್ಕೆ ಹಾಜರಾಗುವ ವೇಳೆ ಹಾವು ಕಚೇರಿ ಎದುರು ಹರಿದು ಮುಂದೆ ಹೊರಟಿತ್ತು.ನಂತರ ಜಿಲ್ಲಾಡಳಿತ ಸಿಬ್ಬಂದಿ ಸ್ನೇಕ್ ಕ್ಯಾಚರ್ ರಾಜುಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ರಾಜು ಹಾವನ್ನು ರಕ್ಷಣೆ ಮಾಡಿದರು.

ಇದು ಮಂಡಲದ ಹಾವಾಗಿದ್ದು ವಿಷಕಾರಿ ಅಲ್ಲ. ಈ ಹಾವು ಕಚ್ಚಿದರೆ ಜನರು ಸಾಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಹಾವಿನ ಜಾತಿಯ ಬಗ್ಗೆ ರಾಜು ಅರಿವು ಮೂಡಿಸಿದರು.


Spread the love

LEAVE A REPLY

Please enter your comment!
Please enter your name here