ಬೆಂಗಳೂರು:- ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಬೇಲ್ ಸಿಕ್ಕ ಬೆನ್ನಲ್ಲೇ ದಾಸನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರಿನ ದರ್ಶನ್ ಮನೆ ಮುಂದೆ ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ.
Advertisement
ಆರ್ ಆರ್ ನಗರದ ನಟನ ನಿವಾಸದ ಮುಂದೆ ತೂಗುದೀಪ ನಿಲಯ ನೇಮ್ ಬೋರ್ಡ್ಗೆ ಹೂ ಹಾರ ಹಾಕಿ ಸಂಭ್ರಮಿಸುತ್ತಿರುವ ಫ್ಯಾನ್ಸ್. ಅದಷ್ಟೇ ಅಲ್ಲ, ಬಿಜಿಎಸ್ ಆಸ್ಪತ್ರೆ ಮುಂದೆ ಕೂಡ ಫೋಟೋ ಹಿಡಿದು ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಘೋಷಣೆ ಕೂಗಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ನೆಚ್ಚಿನ ನಟ ದಾಸ ದರ್ಶನ್ಗೆ ಬೇಲ್ ಸಿಕ್ಕಿರೋದು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆಗಳಲ್ಲಿ ದರ್ಶನ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ.