ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಲ್ಲಿಯ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಅಚರಿಸಿದರು.
ಇಲ್ಲಿಯ ಹಿರೇ ಮಸೂತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೂಲಕ ಅಲ್ಲಾಹುವಿನ ಕುರಿತು ಹಾಡಿನೊಂದಿಗೆ ಮೆರವಣಿಗೆ ನಡೆಸಿದರು. ನಂತರ ಹಾತಲಗೇರಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಮಂಗಳೂರಿನ ಮೌಲಾನಾ ಸಲೀಂ ಅವರು ವಿಧಿ ವಿಧಾನಗಳೊಂದಿಗೆ ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತ್ಯಾಗ-ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಅಲ್ಲಾಹುವಿನ ಸ್ಮರಣೆಯೊಂದಿಗೆ ಈ ದಿನ ಪ್ರಾಮಾಣಿಕವಾಗಿ ಆಚರಿಸಬೇಕು. ದಾನ, ಧರ್ಮ, ಸಹೋದರತ್ವ, ಪ್ರೀತಿಯೊಂದಿಗೆ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು. ಪ್ರತಿಯೊಬ್ಬ ಮುಸಲ್ಮಾನನು ನಿಸ್ವಾರ್ಥತೆಯಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ನಜೀರಅಹ್ಮದ ಕಿರೀಟಗೇರಿ, ಉಪಾಧ್ಯಕ್ಷ ದಾದಸಾಬ ಕೊರ್ಲಹಳ್ಳಿ, ಅಲ್ಲಿಸಾಬ ನದಾಫ್, ಪೀರಸಾಬ ನದಾಫ್, ಮರ್ಧನಸಾಬ ದೊಡ್ಡಮನಿ, ಮಹ್ಮದಸಾಬ ಹಂದ್ರಾಳ ಸೇರಿದಂತೆ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.