ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶನಿವಾರ ಸಡಗರದಿಂದ ಆಚರಿಸಲಾಯಿತು.
ಅಬ್ಬಿಗೇರಿ, ಕೊಚಲಾಪುರ, ತೋಟಗಂಟಿ, ಜಕ್ಕಲಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಹಾಲಕೆರೆ, ನಿಡಗುಂದಿಕೊಪ್ಪ, ಮಾರನಬಸರಿ, ಕಳಕಾಪುರ, ನಿಡಗುಂದಿ, ಮುಂತಾದೆಡೆ ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿಯಿಂದ ಬಕ್ರೀದ್ ಆಚರಿಸಿದರು.
ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಗದಗ ರಸ್ತೆಯಲ್ಲಿರುವ ಈದ್ಗಾ ಮೈದಾನಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮೌಲಾನ್ ಇಮಾಮ್ ಸಾಬ್ ಹಳ್ಳಿಕೇರಿ, ಎ.ಎ. ನವಲಗುಂದ, ಲಾಡಸಾಬ್ ಹದ್ಲಿ, ಎ.ಐ. ರಾಹುತ್, ಡಿ.ಎಚ್. ಅಣ್ಣಿಗೇರಿ, ಅಬ್ದುಲ್ಘಪಾರ ಲತೀಫ್ಸಾಬನವರ, ನಜೀರ್ ಹದ್ಲಿ, ಸಿಕಂದರ್ ಕುದರಿ, ದಾವುದಲಿ ಕುದರಿ, ಹಟೇಲಸಾಬ ಲತೀಫ್ಸಾಬನವರ, ಖಾದರ್ಭಾಷಾ ಹೊಲಗೇರಿ, ನಜೀರ್ಸಾಬ್ ಇಟಗಿ, ಹುಸೇನ್ಸಾಬ್ ಕುದರಿ, ಮೈಬೂಬ್ ಸಾಬ್ ನದಾಫ್, ನಜೀರ್ಸಾಬ್ ದಳವಾಯಿ, ರೈಮಾನ್ ಸಾಬ್ ಮುಲ್ಲಾ, ಮಲಿಕಸಾಬ್ ರೋಣದ, ಗೌಸುಸಾಬ್ ನದಾಫ್, ಹುಸೇನ್ ಗಡಾದ, ದಸ್ತಗಿರ್ ಸಾಬ್ ರವಡೂರ, ಹುಸೇನಸಾಬ್ ಕೊಪ್ಪಳ ಸೇರಿದಂತೆ ಮಕ್ಕಳು, ಯುವಕರು ಪಾಲ್ಗೊಂಡಿದ್ದರು.