ಬೆಂಗಳೂರು| KSRTC ಬಸ್ ಗೆ ಸಿಲುಕಿ 71 ವರ್ಷದ ವ್ಯಕ್ತಿ ಸಾವು – ಡ್ರೈವರ್, ಕಂಡಕ್ಟರ್ ಅರೆಸ್ಟ್!

0
Spread the love

ಬೆಂಗಳೂರು:- ಕೆಎಸ್ ಆರ್ಟಿಸಿ ಬಸ್ ಗೆ ಸಿಲುಕಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯ ರಾಜ್ ಕುಮಾರ್ ರಸ್ತೆಯಲ್ಲಿರುವ ಪಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ಜರುಗಿದೆ.

Advertisement

71 ವರ್ಷದ ಹನುಮಂತರಾಯಪ್ಪ ಸಾವನ್ನಪ್ಪಿರುವ ವ್ಯಕ್ತಿ. ರಿಟೈರ್ಡ್ ಸಿಎಆರ್‌ ಸಿಬ್ಬಂದಿಯಾಗಿದ್ದ ಹನುಮಂತರಾಯಪ್ಪ, ಬಗಲಗುಂಟೆಯಲ್ಲಿ ವಾಸವಿದ್ದ. ಹೀಗೆ ಕೆಲಸದ ನಿಮಿತ್ತವಾಗಿ ರಾಜಾಜಿನಗರಕ್ಕೆ ಬಂದಿದ್ರು. ಬಳಿಕ ನಿನ್ನೆ ಸಂಜೆ 4ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗ್ತಿದ್ದ ವೇಳೆ ಪಕ್ಕದಲ್ಲಿ ಹೋಗ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಸಿಲುಕಿ ಕೆಳಗೆ ಬಿದ್ದಿದ್ರು.

ಈ ವೇಳೆ ಗಂಭೀರ ಗಾಯಗೊಂಡಿದ್ದ ಹನುಮಂತರಾಯಪ್ಪನನ್ನ ಸ್ಥಳೀಯ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಹನುಮಂತ ರಾಯಪ್ಪ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here