ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಬುಧವಾರ ಲಕ್ಷ್ಮೇಶ್ವರ ತಾಲೂಕಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಸಾಂಸ್ಕೃತಿಕ ರಾಯಭಾರಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಜಿ.ಅರಳಿ, ನಾಗರಾಜ ಹಣಗಿ, ಚಂದ್ರಶೇಖರ ಹೂಗಾರ, ಅಪ್ಪಯ್ಯ ಬಾಳಿಹಳ್ಳಿಮಠ, ನಾಗರಾಜ ಚಿಂಚಲಿ, ನಿಂಗಪ್ಪ ಗೊರವರ, ಗಂಗಾಧರ ಅರಳಿ, ಶಿವಲಿಂಗಯ್ಯ ಹೊತ್ತಿಗೆಮಠ, ಶಿವಾನಂದ ಯರಲಗಟ್ಟಿ, ಚಂದ್ರಶೇಖರ ತಹಸೀಲ್ದಾರ ಇದ್ದರು.
Advertisement