ಇಷ್ಟಲಿಂಗವನ್ನು ಪರಿಚಯಿಸಿದ್ದು ಬಸವಣ್ಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಧಾರ್ಮಿಕ ವ್ಯವಸ್ಥೆಗಳು ಸುಲಭವಾಗಿ ಯಾರ ಕೈಗೂ ಸಿಗದ ಸಂದರ್ಭದಲ್ಲಿ ಬಸವಣ್ಣನವರ ಅವತಾರವಾಯಿತು. ಪ್ರತಿಯೊಬ್ಬರೂ ಪ್ರತಿನಿತ್ಯ ಆರಾಧಿಸುವ ಇಷ್ಟಲಿಂಗವನ್ನು ಜಗತ್ತಿಗೆ ಪರಿಚಯಿಸಿದರು. 21ನೇ ಶತಮಾನದಲ್ಲಿ ಲಕ್ಷಾಂತರ ಜನ ಸತ್ಯ ಶುದ್ಧವಾದ ಕಾಯಕ, ಶುದ್ಧವಾದ ಆಹಾರ-ವಿಹಾರ ಕ್ರಮದೊಂದಿಗೆ ಬದುಕಿಗೆ ನಡೆಸಲು ಬುನಾದಿ ಹಾಕಿದವರು ಬಸವಣ್ಣ ಎಂದು ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿಗಳು ಹೇಳಿದರು.

Advertisement

ಇಲ್ಲಿನ ಬಸವೇಶ್ವರ ನಗರದ ಸಮಾನ ಮನಸ್ಕ ಯುವಕರ ಪಡೆ, ಶ್ರೀರಾಮ ಸೇನಾ, ಆಟೋ ಸೇನಾ, ದಲಿತ ಮಿತ್ರ ಮೇಳ ಹಾಗೂ ಶಿವ ರಾಮ ಕೃಷ್ಣ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ವನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಶಾರೀರಿಕ ಪ್ರಮುಖರಾದ ಮಹೇಶ ರೋಖಡೆ, ಜಿಲ್ಲಾಧ್ಯಕ್ಷ ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಸತೀಶ ಕುಂಬಾರ, ಈರಣ್ಣ ಗಾಣಿಗೇರ, ಸುನೀಲ ಮುಳ್ಳಾಳ, ಕಿರಣ ಹಿರೇಮಠ, ಸದಾನಂದಸಿಂಗ್ ಗುರ್ಲಹೊಸೂರ, ಪ್ರಮೋದಸಿಂಗ್ ರಜಪೂತ, ಬಸವರಾಜ ಕುರ್ತಕೋಟಿ, ವಿರೂಪಾಕ್ಷಪ್ಪ ಹೆಬ್ಬಳ್ಳಿ, ಬಸವೇಶ್ವರ ನಗರ ಸಮಾನ ಮನಸ್ಕರ ಯುವಕರ ಪಡೆಯ ವಿಶ್ವನಾಥ ಶೀರಿ, ರಾಚೋಟಿ ಕಾಡಪ್ಪನವರ, ಶಂಕರ ಕಾರಕಟ್ಟಿ, ಮಂಜುನಾಥ ಶಿರೂರ, ಅಕ್ಷಯ ವಿಶ್ವಕರ್ಮ, ಸರ್ಮಥ ನವಲೂರ, ವಿಶ್ವನಾಥ ಕೆರಕಣ್ಣವರ, ಕಾರ್ತಿಕ ಶೆಟ್ಟರ, ವಿಜಯ ಹರ್ಲಾಪೂರ, ಸಾಗರ ಜದಗಾಳೆ, ವಿಶ್ವನಾಥ ಇಟಗಿ, ಈರಣ್ಣ ಗಣಾಚಾರಿ, ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಡಗೇರಿ, ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಕಿಶನ್ ಮೇರವಾಡೆ, ಶಿವಯೋಗಿ ಹಿರೇಮಠ, ಸುರೇಶ ಹಾದಿಮನಿ ಆಟೋ ಸೇನಾದ ಮೌನೇಶ ದಾಸರ, ಮಹಾಬಲೇಶ್ವರ ಶೆಟ್ಟರ, ಶರಣಪ್ಪ ಲಕ್ಕುಂಡಿ, ವಿರೇಶ ಬೀರಲದಿನ್ನಿ, ಮಂಜು ಪೂಜಾರ, ಈರಣ್ಣ ವಾಲ್ಮೀಕಿ, ಜಗದೀಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

 

ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಕಾಯಕವೇ ಕೈಲಾಸ ಎಂದು ನುಡಿದ ಬಸವಣ್ಣನವರ ಜಯಂತ್ಯುತ್ಸವ ಆಚರಿಸುವುದು ನಮ್ಮೆಲ್ಲರ ಹೆಮ್ಮ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here