ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕೃಷಿಕರ ಬದುಕಿಗೆ ಆಧಾರವಾದ, ರೈತರ ಪಾಲಿಗೆ ಜೀವನಾಡಿಯಾದ ಎತ್ತುಗಳ ಮೈತೊಳೆದು ಮಣ್ಣೆತ್ತಿನ ಅಮವಾಸ್ಯೆಯನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ವಿಶಿಷ್ಟವಾಗಿ ಆಚರಿಸಿದರು.
Advertisement
ಹೊರಟ್ಟಿಯವರಿಗೆ ಎತ್ತುಗಳೆಂದರೆ ಅಪಾರ ಪ್ರೀತಿ. ಇತ್ತೀಚೆಗೆ ಯಂತ್ರೋಪಕರಣಗಳು ಕೃಷಿ ಕೆಲಸಕ್ಕೆ ಸಹಾಯಕವಾಗಿದ್ದರೂ ಎತ್ತುಗಳ ಅವಶ್ಯಕತೆ ಬೇಕೇ ಬೇಕಾಗುತ್ತದೆ. ರೈತರ ಎಲ್ಲ ಕಾರ್ಯಗಳಿಗೆ ಹೆಗಲು ಕೊಡುವ ಎತ್ತುಗಳಿಗೆ ಹಿಂದಿನಿಂದಲೂ ಪೂಜ್ಯನೀಯ ಸ್ಥಾನವಿದ್ದು, ಎತ್ತುಗಳು ರೈತರ ಮನೆಗೆ ಶೋಭೆ ಹಾಗೂ ಮಂಗಲಕರವಾಗಿವೆ.
ಸಭಾಪತಿ ಬಸವರಾಜ ಹೊರಟ್ಟಿಯವರು ಹುಬ್ಬಳ್ಳಿ ತಾಲೂಕಿನ ಛಬ್ಬಿ ಬಳಿ ಇರುವ ನಿಸರ್ಗ ತೋಟದಲ್ಲಿ 100ಕ್ಕೂ ಹೆಚ್ಚು ವಿವಿಧ ತಳಿಯ ಎತ್ತುಗಳನ್ನು ಸಾಕುವ ಮೂಲಕ ದನ-ಕರುಗಳ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ. ತಮ್ಮ ತೋಟಕ್ಕೆ ಎತ್ತುಗಳು ಅತ್ಯಂತ ಶೋಭೆ ಎಂದು ಅತ್ಯಂತ ಖುಷಿಯಿಂದ ಹೇಳುತ್ತಿರುತ್ತಾರೆ.