ಬಸವೇಶ್ವರರು ಸಂವಿಧಾನದ ಮೂಲ ಪುರಷ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಮಹಾನ್ ಮಾನವತವಾದಿ, ಶ್ರೇಷ್ಠ ದಾರ್ಶನಿಕ, ಸಮಾಜ ಸುಧಾರಕ, ಜಗದಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ನಮ್ಮ ಮಕ್ಕಳಿಗೆ ವಾರಕ್ಕೆ ಒಂದಾದರೂ ಬಸವೇಶ್ವರರ ವಚನಗಳನ್ನು ಕಲಿಸಬೇಕು, ಅದರಂತೆ ಆಚರಣೆಯನ್ನು ಮಾಡಬೇಕು. 12ನೇ ಶತಮಾನದ ಮಾದರಿಯ ಸಂವಿಧಾನವೇ ಇಂದು ಭಾರತದಲ್ಲಿ ನಡೆಯುತ್ತಿದ್ದು, ಸಂವಿಧಾನದ ಮೂಲ ಪುರಷರೇ ಬಸವೇಶ್ವರರು ಎಂದರು.

ಹಿರಿಯರಾದ ಎಂ.ಎಸ್. ಕರೀಗೌಡ್ರ ಮಾಡನಾಡಿ, ನಾವು ಮಾಡುವ ಉದ್ಯೋಗದಿಂದ ಜಾತಿ ಸೃಷ್ಟಿಯಾಯಿತು. ಮಣ್ಣಿನ ಕೆಲಸವನ್ನು ಮಾಡುವ ಕುಂಬಾರನಾದ, ಬಟ್ಟೆ ತೊಳೆಯುವವ ಮಡಿವಾಳನಾದ, ಕಬ್ಬಿಣ ಕೆಲಸ ಮಾಡುವವ ಕಮ್ಮಾರನಾದ. ಈ ರೀತಿಯಾಗಿ ನಾವು ಮಾಡುವ ಕಾಯಕದಿಂದ ಜಾತಿಗಳು ಹುಟ್ಟಿದವು. ಮಹಾತ್ಮ ಬಸವೇಶ್ವರರು ಎಲ್ಲ ಜಾತಿಯವರನ್ನು ಸಮನಾಗಿ ಕಂಡಿದ್ದಾರೆ ಎಂದರು.

ಹಿರಿಯರಾದ ಶ್ರೀಪತಿ ಉಡುಪಿ, ಮಹಿಳಾ ಮೋರ್ಚಾದ ಹಿರಿಯ ಸದಸ್ಯರಾದ ಕಮಲಾಕ್ಷೀ ಅಂಗಡಿ, ಪ್ರೀತಿ ಹೊನಗುಡಿ, ಸಂಜೀವ ಕಟವಟೆ ಸಾಂದರ್ಭಿಕವಾಗಿ ಮಾತನಾಡಿದರು.

ಶಹರ ಅಧ್ಯಕ್ಷ ಸುರೇಶ ಮರಳಪ್ಪನವರ ಸ್ವಾಗತಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಅಶೋಕ ಸಂಕಣ್ಣವರು, ಕೆ.ಪಿ. ಕೋಟಿಗೌಡ್ರ, ಸುಧೀರ ಕಾಟಿಗರ, ಶಂಕರ ಕಾಕಿ, ಸುರೇಶ ಹೆಬಸೂರ, ದೇವೇಂದ್ರಪ್ಪ ಹೂಗಾರ, ರಾಚಯ್ಯ ಹೊಸಮಠ, ಕುಮಾರ ಮಾರನಬಸರಿ, ಶಶಿಧರ ಕಳ್ಳಿ, ವಿನಾಯಕ ಹೊರಕೇರಿ, ಸಂತೋಷ ಹೂಗಾರ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, 12ನೇ ಶತಮಾನದಲ್ಲಿ ಇದ್ದ ಅಸ್ಪೃಶತೆಯನ್ನು ಹೊಗಲಾಡಿಸಲು ಬಸವೇಶ್ವರರು ಹೋರಾಟ ಮಾಡಿದರು. ಎಲ್ಲ ಜಾತಿಯವರಿಗೂ ಸಮಾನ ಅವಕಾಶವನ್ನು ನೀಡಿ ಅವರನ್ನು ಕೂಡಾ ಸಮಾಜದ ಮುಖ್ಯ ವಾಹಿನಿಯಲ್ಲಿ ತೆಗೆದುಕೊಂಡು ಬಂದರು. ಬಸವಣ್ಣ ಹೇಳಿದಂತೆ ಕಾಯಕ ನಿಷ್ಠೆಯಿಂದ ದುಡಿದಾಗ ದೇವರು ಒಲಿಯುವನು ಎಂದರು.


Spread the love

LEAVE A REPLY

Please enter your comment!
Please enter your name here