ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಂಜುಮನ್-ಎ-ಇಸ್ಲಾಂಸ ಪಾಲಿಟೆಕ್ನಿಕ್, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಷ್ಟ್ರೀಯ ಮಾಹಿತಿ ಶಾಸ್ತ್ರ ಕೇಂದ್ರ (ಎನ್.ಐ.ಸಿ) ಹಾಗೂ ಸೈಬರ್ ಸೆಕ್ಯುರಿಟಿ ಸೆಲ್ ಪೊಲೀಸ್ ಠಾಣೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್ಜಾಲ ಸುರಕ್ಷತಾ ದಿನವನ್ನು ಆಚರಿಸಲಾಯಿತು.
ರಾಷ್ಟ್ರೀಯ ಮಾಹಿತಿ ಶಾಸ್ತ್ರ ಕೇಂದ್ರದ ಜಂಟಿ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದ ಮುಖಾಂತರ ಹಣ ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದ್ದು, ಸುಳ್ಳು ಎಪಿಕೆ ಫೈಲ್, ಆನ್ಲೈನ್ ಉದ್ಯೋಗ, ಕೆ.ವಾಯ್.ಸಿ ಮಾಹಿತಿ, ಆದಾಯ ತೆರಿಗೆ ಎಂದು ಸುಳ್ಳು ಹೇಳಿ ಮಾಹಿತಿ ಪಡೆದು ಜನರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಜನರು ಅಂತರ್ಜಾಲದ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕೆಂದು ಅಭಿಪ್ರಾಯಪಟ್ಟರು.
ಸೈಬರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಸ್.ಎಂ. ಶಿರಗುಪ್ಪಿ ಮಾತನಾಡಿ, ಸೈಬರ್ ಅಪರಾಧಗಳು ವಿದ್ಯಾವಂತರಲ್ಲಿಯೇ ಹೆಚ್ಚುತ್ತಿರುವದು ಅತಂಕಾರಿ ವಿಷಯವಾಗಿದೆ. ಅಪರಿಚತ ಸಂಖ್ಯೆಗಳಿಂದ ಬರುವ ಕರೆಗಳು, ವಿಡಿಯೋ ಕರೆಗಳು, ವಾಟ್ಸಪ್ ಸಂದೇಶಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಜ್ಞಾಪಿಸಿದರು.
ಸಂಸ್ಥೆಯ ಪ್ರಾಚಾರ್ಯ ಕೆ.ಎನ್. ರೇವಣಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಹೀರ ಕಮಾನಗಾರ, ತಬಸ್ಸುಮ್ ಸವಣೂರ, ಎಸ್.ಎ. ತಡೂಳ, ಸಂಜೀವ ವಡೆಯರ ಉಪಸ್ಥಿತರಿದ್ದರು. ಕುಮಾರಸ್ವಾಮಿ ಹಿರೇಮಠ ನಿರೂಪಿಸಿದರು. ಆರ್.ಎಸ್. ಲಾಯದಗುಂದಿ ವಂದಿಸಿದರು.