ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಆಂಧ್ರಪ್ರದೇಶದ ಸ್ಟೇಟ್ ಅಂಡ್ ಕಲ್ಚರ್ ಕಮಿಷನ್ ಕ್ರಿಯೇಟಿವಿಟಿ ಫೈನ್ ಆರ್ಟ್ ಅಕಾಡೆಮಿ ಆಂಧ್ರಪ್ರದೇಶ ಗುಂಟೂರ್ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಇಂಡಿಯನ್ ಆರ್ಟ್ ಫೆಸ್ಟಿವಲ್ ನ್ಯಾಷನಲ್ ಆರ್ಟ್ ಕಾಂಪಿಟೇಶನ್ ಅದ್ದೂರಿಯಾಗಿ ಜರುಗಿತು.
ಈ ಚಿತ್ರಕಲಾ ಸ್ಪರ್ಧೆಯಲ್ಲಿ ತೋಟದ ಚಿಳ್ಳಾಳೇಶ್ವರ ಶಾಲೆಯ ವಿದ್ಯಾರ್ಥಿನಿ ಸದಾಫ ಖಾದರಸಾಬ ತಹಸೀಲ್ದಾರ ಭಾಗವಹಿಸಿ, ಪರಿಸರ ಚಿತ್ರವನ್ನು ರಚಿಸಿ ಅತ್ಯುತ್ತಮ ಕಲಾಕೃತಿ ಪ್ರಶಸ್ತಿಯನ್ನು ಪಡೆದಿದ್ದಾಳೆ.
ಸಾಧಕ ವಿದ್ಯಾರ್ಥಿನಿಗೆ ಚಿತ್ರಕಲೆ ಮತ್ತು ಕರಕುಶಲ ತರಬೇತಿ ನೀಡಿದ ಕಲಾವಿದರಾದ ಡಾ. ಜಾಕೀರಹುಸೇನ ಅವರಿಗೆ ನಗರದ ಎಂ.ಕೆ. ಕೊರ್ಲಹಳ್ಳಿ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷರು ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಆಲೂರ, ಮುತ್ತು ತೋಟದ, ಚಿಳ್ಳಾಳೇಶ್ವರ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಕಲಾಕಾರ ಬಳಗದ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.