ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರು ದಸರಾ ಮಹೋತ್ಸವ-2025ರ ಜಂಬೂ ಸವಾರಿ ಮೆರವಣಿಯಲ್ಲಿ ಗದಗ-ಬೆಟಗೇರಿಯ ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾತಂಡದವರು ಪುರವಂತಿಕೆ ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.
Advertisement
ರಾಜವಂಶಸ್ಥರು, ಮೈಸೂರು ಸಂಸದರಾದ ಯದುವೀರ ಒಡೆಯರ್, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಗಣ್ಯರು ಉಪಸ್ಥಿತಿಯಲ್ಲಿ ತಂಡದ ಕಲಾವಿದರಾದ ಬಸವರಾಜ ಹರ್ಲಾಪೂರ, ಗುರುನಾಥ ಕೋಡಗಂಟಿ, ವಿನಾಯಕ ಮೆಣಸಗಿ, ಮಂಜು ಬಂಕಾಪೂರ, ಉದಯ ಹಳ್ಳಿಕೇರಿ, ಪರಮೇಶ ಕನಕೇರಿ, ವೀರೇಶ ಪಲ್ಲೇದ, ಮಹಾಂತೇಶ ಬೊಬ್ಬಿ, ನವೀನ ಮೆಣಸಗಿ, ವೀರೇಶ ಚಿಪ್ಪಲಕಟ್ಟಿ, ರುದ್ರೇಶ ಇಚ್ಚಂಗಿ, ಶಿವಾನಂದ ಪಲ್ಲೇದ, ಈರಣ್ಣ ನೀಲಗುಂದ, ಮಂಜುನಾಥ ಶೆಟ್ಟಿಕೇರಿ ಪ್ರದರ್ಶನ ನೀಡಿದರು.