ಮೈಸೂರು: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ಬಂದು ಎಲ್ಲಾ ಮುಡಾ ಫೈಲ್ ಹೊತ್ತೊಯ್ದಿದ್ದಾರೆ ಎಂದು ವಿಧಾನಪರಿಷತ್ನ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಆರೋಪಿಸಿ ದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಇಷ್ಟೊಂದು ಭದ್ರತೆ ಏಕೆ. ಮುಡಾದಲ್ಲಿ ಪ್ರತಿ ತಿಂಗಳು ಸಂಬಳ ನೀಡಲು 5 ಕೋಟಿ ರೂ. ಹಣ ಬೇಕು. ಆದರೆ 2 ತಿಂಗಳಿಂದ ಭದ್ರತೆಗಾಗಿ 10 ಕೋಟಿ ರೂ. ಹಣ ವೆಚ್ಚಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸ ನಡೀತಿಲ್ಲ. ಮುಡಾ ಅಕ್ರಮದ ತನಿಖೆಗೆ ಏಕವ್ಯಕ್ತಿ ತನಿಖಾ ಆಯೋಗ ರಚಿಸಿದ್ದಾರೆ. ಆ ಒನ್ಮ್ಯಾನ್ ಕಮಿಷನ್ ಕುಮಾರಕೃಪಾದಿಂದ ಆಪರೇಟ್ ಆಗುತ್ತಿದೆ. ಒನ್ ಮ್ಯಾನ್ ಕಮಿಷನ್ನ ಮೇಜು, ಕುರ್ಚಿಗಾಗಿ 1.5 ಕೋಟಿ ರೂ. ವೆಚ್ಚ ಖರ್ಚು ಆಗಿದೆ. ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದಿದ್ದಾರೆ.