ಭೈರತಿ ಸುರೇಶ್ ಹೆಲಿಕಾಪ್ಟರ್ʼನಲ್ಲಿ ಬಂದು ಎಲ್ಲಾ ಮುಡಾ ಫೈಲ್ ಹೊತ್ತೊಯ್ದಿದ್ದಾರೆ: ಹೆಚ್ ವಿಶ್ವನಾಥ್

0
Spread the love

ಮೈಸೂರು: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್​ನಲ್ಲಿ ಬಂದು ಎಲ್ಲಾ ಮುಡಾ ಫೈಲ್ ಹೊತ್ತೊಯ್ದಿದ್ದಾರೆ ಎಂದು  ವಿಧಾನಪರಿಷತ್​ನ ಬಿಜೆಪಿ ಸದಸ್ಯ ಹೆಚ್​​ ವಿಶ್ವನಾಥ್ ಆರೋಪಿಸಿ ದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಇಷ್ಟೊಂದು ಭದ್ರತೆ ಏಕೆ. ಮುಡಾದಲ್ಲಿ ಪ್ರತಿ ತಿಂಗಳು ಸಂಬಳ ನೀಡಲು 5 ಕೋಟಿ ರೂ. ಹಣ ಬೇಕು. ಆದರೆ 2 ತಿಂಗಳಿಂದ ಭದ್ರತೆಗಾಗಿ 10 ಕೋಟಿ ರೂ. ಹಣ ವೆಚ್ಚಮಾಡಿದ್ದಾರೆ ಎಂದು ಹೇಳಿದ್ದಾರೆ.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸ ನಡೀತಿಲ್ಲ. ಮುಡಾ ಅಕ್ರಮದ ತನಿಖೆಗೆ ಏಕವ್ಯಕ್ತಿ ತನಿಖಾ ಆಯೋಗ ರಚಿಸಿದ್ದಾರೆ. ಆ ಒನ್​ಮ್ಯಾನ್ ಕಮಿಷನ್ ಕುಮಾರಕೃಪಾದಿಂದ ಆಪರೇಟ್ ಆಗುತ್ತಿದೆ. ಒನ್ ಮ್ಯಾನ್ ಕಮಿಷನ್​ನ ಮೇಜು, ಕುರ್ಚಿಗಾಗಿ 1.5 ಕೋಟಿ ರೂ. ವೆಚ್ಚ ಖರ್ಚು ಆಗಿದೆ. ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here