ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಿ. ಗದಗ ಕೋ-ಆಪ್ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ದಿ. ಕೆ.ಎಚ್. ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ 33ನೇ ಪುಣ್ಯಸ್ಮರಣೆ ಆಚರಿಸಲಾಯಿತು. ನಂತರ ಪ್ರಾರ್ಥನಾ ಸಭೆ ಜರುಗಿತು.
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ದಿ. ಕೆ.ಎಚ್. ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಐ.ಎಸ್. ಪಾಟೀಲ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ, ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಿಥುನ್ ಪಾಟೀಲ, ಕರ್ನಾಟಕ ರಾಜ್ಯ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿ ಹಲವರು ಕೆ.ಎಚ್. ಪಾಟೀಲ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮುಖಂಡರಾದ ಬಸವರಾಜ ಕಡೆಮನಿ, ಪ್ರಭು ಬುರಬುರೆ, ಜೆ.ಕೆ. ಜಮಾದಾರ, ಎಸ್.ಆರ್. ನಾಗನೂರ, ರಾಮಣ್ಣ ಫಲದೊಡ್ಡಿ, ಮನ್ಸುಖ್ ಪುಣೇಕರ್, ವಿದ್ಯಾಧರ ದೊಡ್ಡಮನಿ, ಮಾರ್ತಾಂಡಪ್ಪ ಹಾದಿಮನಿ, ಕೃಷ್ಣ ಪರಾಪೂರ, ಪರಪ್ಪ ಕಮತರ, ವಿ.ಕೆ. ಮಟ್ಟಿ, ಗೋಪಾಲ ಮಳಗಿ, ಅಬ್ದುಲ್ ರೆಹಮಾನ್ ಹುಯಿಲಗೋಳ, ಎಕಬೋಟೆ, ಬಸವರಾಜ ಸುಂಕಾಪೂರ, ನಿಂಗಪ್ಪ ಚಲವಾದಿ, ಮಂಜು ಪೂಜಾರ, ಎಂ.ಎಂ. ಬಡ್ನಿ, ಎಸ್.ಎನ್. ಬಳ್ಳಾರಿ, ಮಲ್ಲಪ್ಪ ಕಲಗುಡಿ, ಸಿ.ಬಿ. ದೊಡ್ಡಗೌಡ್ರ, ಹೇಮಂತ ಪಾಟೀಲ, ಎಂ.ಐ. ಪಾಟೀಲ, ವಿಜಯ ಕಲ್ಮನಿ, ಅನಿಲ ಗರಗ, ಎಚ್.ಕೆ. ಅಕ್ಕಿ, ವಸಂತ ಸಿದ್ದಮ್ಮನಹಳ್ಳಿ, ಅನಿಲ ಸಿದ್ದಮ್ಮನಹಳ್ಳಿ, ಇಮ್ತಿಯಾಜ್ ಶಿರಹಟ್ಟಿ, ಮುನ್ನಾ ರೇಶ್ಮಿ, ಚಿಮ್ಮಿ ನದಾಫ್, ಮಹಮ್ಮದ್ ಶಾಲಗಾರ, ಅನ್ವರ ಶಿರಹಟ್ಟಿ, ಜೂನಸಾಬ್ ನಮಾಜಿ, ಯುಸೂಫ್ ನಮಾಜಿ, ರುದ್ರಗೌಡ ಪಾಟೀಲ, ಸೋಮು ಲಮಾಣಿ, ಚನ್ನವೀರ ಮಳಗಿ ಸೇರಿ ಹಲವರು ಇದ್ದರು.