ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭ್ಯ ವಾರ್ಡ್ ನಂ. 11ರಲ್ಲಿ ನಗರಸಭೆ ನಗರೋತ್ಥಾನ ಅನುದಾನದಲ್ಲಿ ಅನುಷಾ ಕಿರಾಣಿ ಅಂಗಡಿಯಿAದ ಗಾಣಿಗ ಸಮುದಾಯ ಭವನದವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು ಶಕುಂತಲಾಬಾಯಿ ಬಿ.ದಂಡಿನ ಹಾಗೂ ನಗರಸಭಾ ಸದಸ್ಯೆ ಶ್ವೇತಾ, ಡಾ. ಪುನೀತ ಬೆನಕನವಾರಿ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ಜನತಾ ಪಾರ್ಟಿಯ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ವಾರ್ಡ್ ನಂ. 11ರಲ್ಲಿ ನಗರಸಭೆ ಸದಸ್ಯೆ ಶ್ವೇತಾ ದಂಡಿನವರು ನಗರಸಭೆಯ ಅನುದಾನದಲ್ಲಿ ಹಲವಾರು ಕಾಮಗಾರಿಗಳನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿ.ಕೆ. ಗುರುಮಠ, ಶಂಕರ, ಸುಧೀರ ಹಾನಗಲ್ ಸಹೋದರರು, ನಗರಸಭಾ ಸದಸ್ಯ ಅನಿಲ ಅಬ್ಬಿಗೇರಿ, ಬಿ.ಎನ್. ಯರನಾಳ, ಎಸ್.ಎಸ್. ಕೊಪ್ಪಳ, ವಿ.ವಿ. ತಿರ್ಲಾಪೂರ, ಬಿ.ಎಂ. ಕನಕೇರಿ, ರುದ್ರೇಶ ಅಳವಂಡಿ, ಗುತ್ತಿಗೆದಾರರಾದ ವಿನಯಕುಮಾರ ಪಾಟೀಲ, ಸಂಕೇತ ರವಿ ದಂಡಿನ, ಆರ್.ಬಿ. ಅಂದಪ್ಪನವರ, ಪ್ರೊ. ಎ.ಕೆ. ಪೂಜಾರ, ಪ್ರೊ. ವಿ.ಕೆ. ಕೊಳ್ಳಿ, ಶರಣಬಸವ ವೆಂಕಟಾಪೂರ, ಎಸ್.ಎಫ್. ಜಕಬಾಳ, ಸೋಮಲಿಂಗಪ್ಪ ಬೆನಕನವಾರಿ, ಶ್ರೀಮತಿ ಪುಷ್ಪಾ ಭಂಡಾರಿ, ಸುಮಾ ನಾರಪ್ಪನವರ, ಸುಮಾ ಮಕ್ಕಣ್ಣವರ, ಚೇತನಾ ಉಪ್ಪಿನ, ಅನುರಾಧಾ ಸಾಲಿ ಸೇರಿದಂತೆ ವಾರ್ಡಿನ ಹಿರಿಯರು, ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.