ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹೊರವಲಯದಲ್ಲಿರುವ ಜಾಗೃತ ದುರ್ಗಾದೇವಿ ದೇವಸ್ಥಾನದ ನೂತನ ಕಾರ್ಯಾಲಯ ಕಟ್ಟಡಕ್ಕೆ ಸಚಿವರಾದ ಎಚ್.ಕೆ. ಪಾಟೀಲ ಅನುದಾನ ಬಿಡುಗಡೆ ಮಾಡಿದ್ದು, ಕಟ್ಟಡ ನಿರ್ಮಾಣಕ್ಕೆ ಗದಗ ತಾ.ಪಂ ಮಾಜಿ ಅಧ್ಯಕ್ಷ ಎಮ್.ಐ. ಪಾಟೀಲ ಭೂಮಿಪೂಜೆ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಬಿಂಕದಕಟ್ಟಿ ಗ್ರಾ.ಪಂ ಸದಸ್ಯ ನಿಂಗಪ್ಪ ಪರಪ್ಪನವರ, ವೇ.ಮೂ. ಶಿವಪುತ್ರಯ್ಯ ಯಲಬುರ್ಗಿಮಠ, ಮಹಾದೇವಪ್ಪ ಚುರ್ಚಿಹಾಳ, ಬಿ.ಕೆ. ಆರಟ್ಟಿ, ಎಮ್.ಎಚ್. ಮಡಿಕೇರಿ, ಎಸ್.ಎನ್. ಪಾಟೀಲ, ಜಕ್ಕನಗೌಡ ಜಕ್ಕನಗೌಡ್ರ, ಶಿವಲಿಂಗಪ್ಪ ಆರಟ್ಟಿ, ಬಸವರಾಜ ಅನವಾಲದ, ಈರಪ್ಪ ಪರಪ್ಪನವರ, ಈಶ್ವರಪ್ಪ ಅಂಬಿಗೇರ, ಬಸಯ್ಯ ಯಲಬುರ್ಗಿಮಠ, ಬಸವರಾಜ ಖಾನಾಪೂರ, ಅಂದಪ್ಪ ಬ್ಯಾಹಟ್ಟಿ, ಸೋಮನಗೌಡ ಪರ್ವತಗೌಡ್ರ, ಯಮನೂರಸಾಬ ನದಾಫ್, ಶಿವಶಂಕರಪ್ಪ ಡಿ.ಆರಟ್ಟಿ, ಮುತ್ತಣ್ಣ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.