ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಪ್ರತಿಭಾವಂತ ಬಾಲಕ ಭುವನ ಗದ್ದಿ ಯುವ ಕ್ರೀಡಾಸಿರಿ ಪ್ರಶಸ್ತಿಗೆ ಪಾತ್ರನಾಗಿದ್ದು, ಶನಿವಾರ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶಿ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಟೇಕ್ವಾಂಡೋ (ಕರಾಟೆ) ಕ್ರೀಡಾಪಟು ಭುವನ್ ಗದ್ದಿ ಇವರಿಗೆ `ಯುವ ಕ್ರೀಡಾಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು.
ಸಾಧಕ ಬಾಲಕನಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ ಪಾಠಶಾಲೆ ಕಾಶಿ ಜಂಗಮವಾಡಿ ಖಾಸಾ ಶಾಖಾ ಮಠ, ಬಿಸನಳ್ಳಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ ಹಾಗೂ `ವೀರಶೈವ ಅಷ್ಟಾವರಣ ವಿಜ್ಞಾನ’ ಆಶೀರ್ವಚನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಭುವನ ಗದ್ದಿಯ ಸಾಧನೆಗೆ ತರಬೇತಿ ನೀಡಿದ ತರಬೇತುದಾರ ರವಿ ಮಾಸ್ಟರ್ ಹಾಗೂ ಲಕ್ಷೆö್ಮÃಶ್ವರ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.