ಬೆಂಗಳೂರು:- ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ದರ ಏರಿಕೆ ಜೊತೆಗೆ ಹೆಚ್ಚುವರಿ ಹಾಲು ಕಡಿತಕ್ಕೆ KMF ಚಿಂತನೆ ಮಾಡಿದೆ.
ಇಷ್ಟು ದಿನ ಪ್ರತಿ ಲೀಟರ್, ಅರ್ಧ ಲೀಟರ್ ಹಾಲಿನ ಪ್ಯಾಕೆಟ್ನಲ್ಲಿ ಬರುತ್ತಿದ್ದ ಹೆಚ್ಚುವರಿ ಹಾಲಿಗೂ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆ.
ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ಏರಿಕೆ ದರ ಶಾಕ್ ಎದುರಾಗುವ ಬಗ್ಗೆ ಸರ್ಕಾರವೇ ಸುಳಿವು ನೀಡಿದೆ. ಈ ಮಧ್ಯೆ ಕಳೆದ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ಮಾಡಿದ್ದು, ಇದರ ಜೊತೆಗೆ ಸದ್ಯ ಹೆಚ್ಚುವರಿ ಹಾಲಿಗೆ ನೀಡುತ್ತಿರುವ ಹಣಕ್ಕೆ ಹೆಚ್ಚುವರಿ ದರ ಏರಿಕೆ ಮಾಡಿ, ಹಾಲನ್ನು ಕಡಿತಗೊಳಿಸುವ ಬಗ್ಗೆ ಕೆಎಂಎಫ್ ಚಿಂತನೆಗೆ ಮುಂದಾಗಿದೆ.
ಸದ್ಯ ಬೇಸಿಗೆ ಕಾರಣ ಹಿಂದೆ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಉತ್ಪಾದನೆ ಕಷ್ಟವಾಗಲಿದ್ದು, ಸುಮಾರು 10 ರಿಂದ 15%ನಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನ ಕಡಿತ ಮಾಡುವ ಸಾಧ್ಯತೆ ಇದೆ. ಆದರೆ ಹಾಲು ಕಡಿತ ಆದರೂ ಹೆಚ್ಚುವರಿ ಹಾಲಿಗೆ ಪಡೆಯುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.