ಜನ್ಮ ದಿನಾಚರಣೆಗಳು ದಾರಿ ತಪ್ಪುತ್ತಿವೆ : ಸುಜಾತ ದೊಡ್ಡಮನಿ

0
Birthday celebration of President Sujatha Doddamani
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಂಗ್ರೆಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತ ದೊಡ್ಡಮನಿ ಗುರುವಾರ ಪಟ್ಟಣದ ಬಿ.ಡಿ ತಟ್ಟಿ ವಿಕಲಚೇತನ ಶಾಲೆಯ ಮಕ್ಕಳೊಂದಿಗೆ ತಮ್ಮ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

Advertisement

ಈ ವೇಳೆ ಅವರು ಮಕ್ಕಳಿಗೆ ನೋಟ್‌ಬುಕ್, ಪೆನ್, ಸಿಹಿ ಹಂಚಿ ಮಾತನಾಡಿ, ವಿಶೇಷ ಚೇತನ ಮಕ್ಕಳು ದೇವರ ಸಮಾನರಾಗಿದ್ದು ಆ ಮಕ್ಕಳ ಹಾರೈಕೆಯಿಂದ ಬದುಕು ಸುಂದರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನ್ಮ ದಿನಾಚರಣೆಗಳು ದಾರಿ ತಪ್ಪುತ್ತಿದ್ದು, ಈ ವೇಳೆ ನಮ್ಮ ಸಂಪ್ರದಾಯ, ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿ, ಸಂಪ್ರದಾಯ ವೈಭವೀಕರಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ನಾವು ಮಾಡುವ ಯಾವುದೇ ಕೆಲಸದಿಂದ ಇನ್ನೊಬ್ಬರಿಗೆ ಸಹಾಯ-ಸಂತಸ ನೀಡಬೇಕು ಆಗ ಮಾತ್ರ ಆ ಕಾರ್ಯ, ಆಚರಣೆಗೊಂದು ಅರ್ಥ ಬರುತ್ತದೆ ಎಂದರು.

ಈ ವೇಳೆ ಮೋಹನ ನಂದೆಣ್ಣವರ, ಸದಾನಂದ ನಂದೆಣ್ಣವರ, ಮಾಂತೇಶ ಗುಡಸಲಮನಿ, ಪೃಥ್ವಿ ನಂದೆಣ್ಣವರ, ರಾಮು ಅಡಗಿಮನಿ, ಸಂತೋಷ ಹಾದಿಮನಿ, ನಿಂಗಪ್ಪ ಬಾಲಣ್ಣವರ, ಶಿವು ಅಯ್ಯಣ್ಣವರ, ವಸೀಂ ಮುಚ್ಚಾಲೆ, ಹನಮಂತ ಗುಡಿಸಲಮನಿ ಸೇರಿ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here