ಮೈಸೂರು: ರಾಜ್ಯ ರಾಜವಂಶಸ್ಥ ಹಾಗೂ ಬಿಜೆಪಿಯ ಸಂಸದ ಯದುವೀರ್ ಒಡೆಯರ್ ಅವರ ಅಜ್ಜ, ಮದನ್ ಗೋಪಾಲ್ ರಾಜ್ ಅರಸ್ (93), ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
Advertisement
ಅವರ ನಿಧನವು ಕುಟುಂಬ ಮತ್ತು ರಾಜಕೀಯ ವಲಯದಲ್ಲಿ ಸಂತಾಪವನ್ನುಂಟುಮಾಡಿದೆ. ಅದರಂತೆ ಇಂದು ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಂಸದ ಯದುವೀರ್ ಅವರು ಅಜ್ಜನ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ದುಃಖಕರ ಘಟನೆ ಹಿನ್ನೆಲೆಯಲ್ಲಿ, ಸಂಸದ ಯದುವೀರ್ ಅವರು ತಮ್ಮ ಎಲ್ಲಾ ದೈನಂದಿನ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ಕುಟುಂಬದೊಂದಿಗೆ ಶೋಕ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ನೇಹಿತರು ಮತ್ತು ರಾಜಕೀಯ ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.