ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಜಾರಿ ನಿರ್ದೇಶನಲಯ ರಾಜ್ಯ ಸಭಾ ಸದಸ್ಯರಾದ ಸೋನಿಯಾ ಗಾಂಧಿ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ದೇಶ ಲೂಟಿ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಿದರು.

Advertisement

ನೈತಿಕ ಹೊಣೆ ಹೊತ್ತು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಪರಿಷತ್ ಸದ್ಯಸರಾದ ಕೆ.ಎಸ್. ನವೀನ, ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಫಕ್ಕಿರೇಶ ರಟ್ಟಿಹಳ್ಳಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿ ಕಟ್ಟಿ, ಕಿರಣ್ ಕಲಾಲ್, ರೋಹನ್ ಕೂಡನಹಳ್ಳಿ, ಮಲ್ಲಿಕಾರ್ಜುನ ಸಂತೋಜಿ, ರಾಜೇಶ ಅರಕಲ್, ಪ್ರಕಾಶ ಕೋತಂಬ್ರಿ, ಉಮೇಶ್ ಚನ್ನು ಪಾಟೀಲ್, ಹುಲ್ಲಪ್ಲ ಕೆಂಗಾರ್, ವಿನಾಯಕ್ ಹೊರಕೇರಿ, ಬಸವರಾಜ್ ನರೇಗಲ್, ಅರವಿಂದ್ ಅಣ್ಣಿಗೇರಿ, ವೀರಪ್ಪ ಹೂಗಾರ್, ಕಾಳು ತೋಟದ್, ಶಶಿಧರಗೌಡ ಕಳ್ಳಿ, ನವೀನ್ ಕೋಟೆಕಲ್, ಶಿವು ಗೋಟುರ್, ಕಾರ್ತಿಕ್ ಶಿಗ್ಲಿಮಠ್, ಕೃಷ್ಣ ಚಿಂತಾ, ಆನಂದ್ ಕಟಗೇರಿ, ಪಕ್ಷದ ಪದಾಧಿಕಾರಿಗಳು, ಹಿರಿಯರು, ಚುನಾಯಿತ ಪ್ರತಿನಿಧಿಗಳು, ಯುವ ಮೋರ್ಚಾ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here