ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ ಹಾಗೂ ಯುವ ಮೋರ್ಚಾ ಗದಗ ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ, ನಶಾ ಮುಕ್ತ ಭಾರತ, ವೋಕಲ್ ಫಾರ್ ಲೋಕಲ್ನಂತಹ ರಾಷ್ಟ್ರೀಯ ಅಭಿಯಾನಗಳ ಸಂದೇಶದೊಂದಿಗೆ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮ್ಯಾರಥಾನ್ ಓಟ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರೀಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸೇವಾ ಪಾಕ್ಷಿಕ ಸಂಚಾಲಕ ಲಿಂಗರಾಜ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ, ಮ್ಯಾರಥಾನ್ ಸಂಚಾಲಕ ಸಂತೋಷ ಅಕ್ಕಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಯುವ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷ ನವೀನ ಕೊಟಿಕಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ನರೇಗಲ್, ಪ್ರಮುಖರಾದ ಅನಿಲ ಅಬ್ಬಿಗೇರಿ, ಶಶಿಧರ ದಿಂಡೂರ, ನಿರ್ಮಲಾ ಕೊಳ್ಳಿ, ಪ್ರಶಾಂತ ಜಾದವ, ರಮೇಶ ಸಜ್ಜಗಾರ, ಕೆ.ಪಿ. ಕೋಟಿಗೌಡ್ರ, ವಿಜಯಲಕ್ಷ್ಮಿ ಮಾನ್ವಿ, ನಾಗರಾಜ ತಳವಾರ, ಕಿರಣ ಕಲಾಲ, ಸಂಗನಾಳ ವಕೀಲರು, ಕಾಳು ತೊಟದ, ರಾಹುಲ್ ಸಂಕಣ್ಣವರ, ಗೋಪಾಲ ಗಡ್ಡದವರ, ಚಂದ್ರು ಒಂಟೆತ್ತಿನವರ, ಸುರೇಶ ಹೆಬಸೂರ, ನವೀನ ಕುರ್ತಕೋಟಿ, ಪಂಚಾಕ್ಷರಿ ಅಂಗಡಿ, ಸ್ವಾತಿ ಅಕ್ಕಿ, ಶ್ರೀಕಾಂತ ಆದೆಪ್ಪನವರ ಮುಂತಾದವರು ಉಪಸ್ಥಿತರಿದ್ದರು.



