ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಬಿಜೆಪಿ ಯುವ ಮೋರ್ಚಾ, ಗದಗ ನಗರ ಮಂಡಲ ಯುವ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 27 ಜನ ರಕ್ತದಾನವನ್ನು ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಪ್ರಧಾನಿ ಮೋದಿಯವರ ಜನ್ಮದಿನದ ನಿಮಿತ್ತ ವಿಶಿಷ್ಟ ಕಾರ್ಯಕ್ರಮವನ್ನು ಯುವ ಬಿಜೆಪಿ, ಗದಗ ನಗರ ಬಿಜೆಪಿ ಮತ್ತು ಜಿಲ್ಲೆಯ 9 ಮಂಡಲಗಳ ಯುವ ಬಿಜೆಪಿ ವತಿಯಿಂದ ಯಶಸ್ವಿಗೊಳಿಸಿದ್ದಕ್ಕೆಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಹಿರಿಯರಾದ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಗದಗ ನಗರ ಬಿಜೆಪಿ ಅಧ್ಯಕ್ಷ ಅನಿಲ ಅಬ್ಬಿಗೇರಿ, ಸುರೇಶ ಮರಳಪ್ಪನವರ, ಶಶಿಧರ ದಿಂಡೂರ, ರಮೇಶ ಸಜ್ಜಗಾರ, ಉಮೇಶ ಚನ್ನುಪಾಟೀಲ, ಚಂದ್ರು ಕುರಿ, ಕಿರಣ ಕಟ್ಟಿ, ಪ್ರಕಾಶ ಕೊತಂಬರಿ, ರೋಹನ, ನವೀನ ಕೊಟೆಕಲ್, ನವೀನ ಕುರ್ತಕೋಟಿ, ರಾಹುಲ ಸಂಕಣ್ಣವರ, ವಿನಾಯಕ ಹೊರಕೇರಿ, ಶಂಕರ ಕಾಕಿ, ಅವಿನಾಶ ಹೊನಗುಡಿ, ಧರ್ಮದಾಸ, ಅರುಣ ಹುಲ್ಲೂರ, ವಿನೋದ ಹಂಸನೂರ ಮುಂತಾದವರಿದ್ದರು.