ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿಜಯನಗರ ಬಡಾವಣೆಯಲ್ಲಿರುವ ಶ್ರೀವಿಶ್ವಕರ್ಮ ಭವನದ `ಕಲಾ ತಪಸ್ವಿ ದಿ. ಟಿ.ಪಿ. ಅಕ್ಕಿ’ ವೇದಿಕೆಯಲ್ಲಿ, ನಿವೃತ್ತ ಪ್ರಾಚಾರ್ಯ ರಾಜಗೋಪಾಲ ಡಿ ಕಡ್ಲಿಕೊಪ್ಪ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ 65ನೇ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ `ಕಲೋದ್ಯಮಿ’ ಅಭಿನಂದನಾ ಗ್ರಂಥ ಹಾಗೂ `ವಿಶ್ವಕರ್ಮ ಸಾಹಿತ್ಯ ಸಂಪದ’ ಗ್ರಂಥಗಳನ್ನು ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಬಿಡುಗಡೆಗೊಳಿಸಿದರು.
ಜ.ತೋಂಟದ ಸಿದ್ಧರಾಮ ಸ್ವಾಮೀಜಿ, ಬಾಗಲಕೋಟಿಯ ಮಳೆ ರಾಜೇಂದ್ರ ಮುರನಾಳ ಕ್ಷೇತ್ರ ಮಠದ ಶ್ರೀ ಮಳೆರಾಜೇಂದ್ರಸ್ವಾಮಿ ಮಹಾಪುರುಷ ಸ್ವಾಮೀಜಿ, ಯಾದಗಿರಿಯ ಶಹಪುರದ ಶ್ರೀವಿಶ್ವಕರ್ಮ ಏಕದಂಡಗಿಮಠದ ಶ್ರೀಕಾಳಹಸ್ತೇಂದ್ರ ಮಹಾಸ್ವಾಮೀಜಿ, ರಾಜಗೋಪಾಲ ಡಿ.ಕಡ್ಲಿಕೊಪ್ಪ, ಲಕ್ಷ್ಮೀ ಕಡ್ಲಿಕೊಪ್ಪ, ಪ್ರಾ. ಅಶೋಕ ಟ.ಅಕ್ಕಿ, ಪ್ರೊ. ಶಿವಾನಂದ ಪಟ್ಟಣಶೆಟ್ಟಿ, ಡಾ. ಕೆ.ಪಿ. ಈರಣ್ಣ, ಪಿ.ಬಿ. ಬಡಿಗೇರ, ಡಾ. ಜಿ.ಬಿ. ಪಾಟೀಲ, ಪ್ರೊ. ಸಿದ್ದು ಯಾಪಲಪರವಿ, ಡಾ. ಎಸ್.ಡಿ. ಯರಗೇರಿ, ಮೌನೇಶ ಸಿ.ಬಡಿಗೇರ(ನರೇಗಲ್ಲ), ವಿಶ್ವನಾಥ ಕಮ್ಮಾರ, ವಿಜಯ ಕಿರೇಸೂರ ಸೇರಿದಂತೆ ಕಡ್ಲಿಕೊಪ್ಪ ಕುಟುಂಬದ ಸದಸ್ಯರು ವೇದಿಕೆಯಲ್ಲಿದ್ದರು.