ಕಲಬುರಗಿ:- ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಬಳಿ ಸಂಭವಿಸಿದ ಅಪಘಾತದಲ್ಲಿ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
ಸೀಮೆಂಟ್ ಕಂಪನಿಗೆ ತೆರಳುತಿದ್ದ ಮಣ್ಣು ತುಂಬಿದ ಲಾರಿ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ್ದಾನೆ. ಐದು ವರ್ಷದ ಅಯ್ಯಪ್ಪ ಮೃತ ಬಾಲಕ. ರಾಜಶ್ರೀ ಸಿಮೆಂಟ್ ಕಾರ್ಖಾನೆ ಪಕ್ಕದಲ್ಲೇ ವಾಸವಾಗಿದ್ದ ಬಾಲಕನಿಗೆ ಜವರಾಯ ಮನೆ ಬಾಗಿಲಿಗೆ ಬಂದಿದ್ದು, ಪೋಷಕರ ಕಣ್ಣೀರ ಕೋಡಿ ಹರಿದಿದೆ.
ಘಟನೆ ಖಂಡಿಸಿ ಸೀಮೆಂಟ್ ಕಾರ್ಖಾನೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮಳಖೇಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.