ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಉಂಡೇನಹಳ್ಳಿ ಗ್ರಾಮದ ಬಳಿ ಸೂರಣಗಿ ರಸ್ತೆ ಹಾಗೂ ಬಾಲೇಹೊಸೂರ ರಸ್ತೆಗೆ ಅಡ್ಡಲಾಗಿ ಪಿಡಬ್ಲೂಡಿ ಇಲಾಖೆಯಿಂದ 1 ಕೋಟಿ ರೂ ವೆಚ್ಚದಲ್ಲಿ ಬೃಹತ್ ಸಿಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆಗಳು, ಸೇತುವೆಗಳು ಹದಗೆಟ್ಟಿವೆ. ಇವುಗಳ ಅಭಿವೃದ್ಧಿಗಾಗಿ ಪಿಡಬ್ಲೂಡಿ ಮತ್ತು ಕೆಆರ್ಡಿಸಿಎಲ್ಗೆ ಹೆಚ್ಚಿನ ಅನುದಾನಕ್ಕೆ ಕ್ರಿಯಾಯೋಜನೆಯೊಂದಿಗೆ ಮನವಿ ಮಾಡಿದ್ದೇನೆ. ಅನುದಾನ ಲಭ್ಯತೆಯ ಆಧಾರದ ಮೇಲೆ ರಸ್ತೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸೂರಣಗಿ ರಸ್ತೆ, ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಪಿಎಂಜಿಎಸ್ವೈ ರಸ್ತೆಗಳ ನಿರ್ವಹಣೆಗೆ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ ಸಂಚಾರಕ್ಕೆ ಅನಕೂಲ ಕಲ್ಪಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಚಂದ್ರು ಈಳಗೇರ, ಸದಸ್ಯರಾದ ನಿಂಗಪ್ಪ ಬಂಕಾಪುರ, ಫಕ್ಕೀರಪ್ಪ ಭರಮಗೌಡ್ರ, ಸಕ್ರಪ್ಪ ಲಮಾಣಿ, ಮಧುಮಾಲತಿ ಈಳಗೇರ, ಮಲ್ಲೇಶಪ್ ಮಣ್ಣಮ್ಮನವರ, ಸಂಜೀವಕುಮಾರ ಪಾಟೀಲ, ಟೋಪಣ್ಣ ಲಮಾಣಿ, ಶಿವಣ್ಣ ಲಮಾಣಿ, ಬಿ.ಪಿ. ಹುಲಕೋಟಿ, ಬಿ.ಎಸ್. ಈಳಗೇರ, ಪುಂಡಲೀಕ ಲಮಾಣಿ, ಬಸವರಾಜ ಚಕ್ರಸಾಲಿ ಸೇರಿದಂತೆ ದೊಡ್ಡೂರ, ಉಂಡೇನಹಳ್ಳಿ, ಸುವರ್ಣಗಿರಿ, ದೊಡ್ಡೂರ ತಾಂಡಾದ ಹಿರಿಯರು ಪಾಲ್ಗೊಂಡಿದ್ದರು.