ಕೆಲಸದ ವಿಚಾರವಾಗಿ ಜಗಳ: ತಾಯಿಯ ಎದುರೇ ತಮ್ಮನನ್ನು ಕೊಂದ ಅಣ್ಣ!

0
Spread the love

ಬೆಂಗಳೂರು:- ಕೆಲಸದ ವಿಚಾರವಾಗಿ ನಡೆದ ಜಗಳದಲ್ಲಿ ತಾಯಿಯ ಎದುರೇ ತಮ್ಮನನ್ನು ಅಣ್ಣ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

Advertisement

ಬೆಂಗಳೂರಿನ ಬೇಗೂರಿನ ಲಕ್ಷ್ಮೀ‌ಪುರದಲ್ಲಿ ಸಂಭವಿಸಿದೆ. ಪ್ರತಾಪ್ (18) ಮೃತದುರ್ದೈವಿ. ರಜನಿ (28) ಕೊಲೆ ಮಾಡಿದ ಆರೋಪಿ. ಪೋಲಿಸರು ಆರೋಪಿ ರಜನಿಯನ್ನು ಬಂಧಿಸಿದ್ದು, ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದನು. ಕೆಲಸಕ್ಕೆ ಹೋಗದ ವಿಚಾರಕ್ಕೆ ರಜನಿ ಮತ್ತು ಪ್ರತಾಪ್​ ನಡುವೆ ಗುರುವಾರ ಮಧ್ಯಾಹ್ನ ಜಗಳವಾಗಿದೆ.

ಜಗಳದ ನಡುವೆ ಮೃತ ಪ್ರತಾಪ್ ರಜನಿಗೆ ದಂಪಿಂಡ ಎಂದು ಬೈದಿದ್ದಾನೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಬಳಿಕ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ತಾಯಿ ಬಿಡಿಸಲು ಬಂದರೂ ಅಣ್ಣ-ತಮ್ಮಂದಿರ ಜಗಳ ನಿಂತಿಲ್ಲ. ಬಳಿಕ ರಜನಿ ಅಡುಗೆ ಮನೆಗೆ ತೆರಳಿ ಚಾಕು ತಂದು, ತಮ್ಮ ಪ್ರತಾಪ್​​ನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರತಾಪ್ ಕುಸಿದು ಬಿದ್ದಿದ್ದಾನೆ.

ಘಟನೆ ಬಳಿಕ ರಜಿನಿ ನಾಪತ್ತೆಯಾಗಿದ್ದನು. ಕೂಡಲೆ ಪ್ರತಾಪ್​​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಪ್ರತಾಪ್​​ ಮೃತಪಟ್ಟಿದ್ದಾನೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here