ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಸುದೃಢ ಮಕ್ಕಳಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿ ಮುಖ್ಯಸ್ಥರು ಹಾಗೂ ಗದಗ ಜಿ.ಪಂ ಮಾಜಿ ಅಧ್ಯಕ್ಷರಾದ ಶಕುಂತಲಾ ಬಿ.ದಂಡಿನ ನುಡಿದರು.
ಕೆವಿಎಸ್ಆರ್ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧ ಶ್ರೀಶೈಲಪ್ಪ ಬಿ.ತೊಮ್ಮರಮಟ್ಟಿ, ಸಂಗಯ್ಯ ಕ.ಹಿರೇಮಠ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಮಕ್ಕಳಿಗೆ ಇಂದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಕ್ರೀಡಾ ಶಿಕ್ಷಣ ಅವಶ್ಯ. ಸುದೃಢ ಭಾರತ ನಿರ್ಮಾಣಕ್ಕಾಗಿ ಸುದೃಢ ಮಕ್ಕಳ ನಿರ್ಮಾಣ ಇಂತಹ ಶಾಲೆಗಳಲ್ಲಿ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಕೇತ ದಂಡಿನ, ಮುಖ್ಯ ಶಿಕ್ಷಕಿ ಪಿ.ಟಿ. ಬಿಸನಳ್ಳಿ, ಪ್ರೊ. ದೊಡ್ಡಮನಿ, ರಾಮು, ಶಿಕ್ಷಕರಾದ ಎಂ.ಕೆ. ಬೇವಿನಕಟ್ಟಿ, ಎಸ್.ಎಸ್. ಮುಧೋಳ, ದೀಪಾ ಎಂ, ದೈಹಿಕ ಶಿಕ್ಷಕ ಎಸ್.ಕೆ. ಬಸಾಪುರ, ಶಾಲಾ ಸಿಬ್ಬಂದಿ ಬಿ.ಎನ್. ಕಮ್ಮಾರ, ಆಯ್.ಎಂ. ಕುರ್ತಕೋಟಿ ಉಪಸ್ಥಿತರಿದ್ದರು. ಎಂ.ಕೆ. ಬೇವಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.



