ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕೊನೆಗೂ ಗ್ರ್ಯಾಂಡ್ ಫಿನಾಲೆಯೊಂದಿಗೆ ತೆರೆ ಬಿದ್ದಿದೆ. ಈ ಬಾರಿ ದಾಖಲೆ ಮತಗಳೊಂದಿಗೆ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದು, ಕೋಟಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಬಹುಮಾನಗಳನ್ನು ಘೋಷಿಸಿದರು. ಗಿಲ್ಲಿ ನಟನಿಗೆ ಟ್ರೋಫಿಯ ಜೊತೆಗೆ 50 ಲಕ್ಷ ರೂ. ನಗದು, ಮಾರುತಿ ಸುಜುಕಿ ಕಂಪನಿಯಿಂದ ಒಂದು ಕಾರು ಹಾಗೂ ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂ. ವಿಶೇಷ ಬಹುಮಾನ ಲಭಿಸಿದೆ. ಈ ಮೂಲಕ ಗಿಲ್ಲಿಗೆ ಲಕ್ಕಿ ಬಂಪರ್ ಸಿಕ್ಕಂತಾಗಿದೆ.
ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ವಿವಿಧ ಪ್ರಾಯೋಜಕರಿಂದ ಒಟ್ಟು 25 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಮೂರನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ 12 ಲಕ್ಷ ರೂ. ಬಹುಮಾನ ಲಭಿಸಿದೆ.
ಈ ಬಾರಿ ನೀಡಲಾದ ಬಿಗ್ ಬಾಸ್ ಟ್ರೋಫಿಯೂ ವಿಭಿನ್ನವಾಗಿದೆ. ಟ್ರೋಫಿಯಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಂಸ್ಕೃತಿಯ ಪ್ರತೀಕಗಳನ್ನು ಕೆತ್ತಲಾಗಿದೆ. ಆನೆ, ಅರಮನೆ, ದರ್ಪಣ ಸುಂದರಿ, ಮೇಲ್ಭಾಗದಲ್ಲಿರುವ ಬಿಗ್ ಬಾಸ್ ಕಣ್ಣು ಹಾಗೂ ಒಳಭಾಗದಲ್ಲಿರುವ ಕನ್ನಡ ಸಂಖ್ಯೆಗಳ ಕ್ಲಾಕ್ ವಿನ್ಯಾಸ – ಟ್ರೋಫಿಗೆ ವಿಶೇಷ ಗೌರವ ತಂದಿದೆ. ಇದು ಕನ್ನಡತನವನ್ನು ರಾಷ್ಟ್ರಮಟ್ಟಕ್ಕೆ ತೋರಿಸುವ ಪ್ರಯತ್ನವೆಂದು ಮೆಚ್ಚುಗೆ ವ್ಯಕ್ತವಾಗಿದೆ.
ಈ ಸೀಸನ್ ಮೂಲಕ ಬಿಗ್ ಬಾಸ್ ಕೇವಲ ರಿಯಾಲಿಟಿ ಶೋ ಅಲ್ಲ, ಕನ್ನಡಿಗರ ಭಾವನೆಗಳ ಹಬ್ಬ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.



