ಗದಗ:- ಬಸ್ ಫುಡ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಹೆಬ್ಬೆರೆಳು ಕಟ್ ಆಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರಿನಲ್ಲಿ ಜರುಗಿದೆ.
ಆಯತಪ್ಪಿ ವಿದ್ಯಾರ್ಥಿ ಕಾಲು ನೆಲಕ್ಕೆ ತಗುಲಿದ್ದ ವೇಳೆ ಹೆಬ್ಬೆರಳು ತುಂಡಾಗಿದೆ. ಗಾಯಗೊಳಗಾದ ವಿದ್ಯಾರ್ಥಿ ಹೆಸರು ಸಂಗಮೇಶ್ ಹಿರೇತನ ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿಯು, ಸಾರಿಗೆ ಬಸ್ ನಲ್ಲಿ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ. ದೊಡ್ಡೂರಿನಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಕಾಲೇಜಿಗೆ ಹೊರಟಿದ್ದಾಗ ಘಟನೆ ಜರುಗಿದೆ.
ಪ್ರಯಾಣಿಕರಿಂದ ಈ ಬಸ್ ತುಂಬಿ ತುಳುಕುತಿತ್ತು. ಹಲವು ವಿದ್ಯಾರ್ಥಿಗಳು ಬಾಗಿಲಲ್ಲೇ ನಿಂತು ಪ್ರಯಾಣ ಮಾಡುತ್ತಿದ್ದರು. ಬಸ್ ದೊಡ್ಡೂರಿನಿಂದ ಶಿಗ್ಲಿ ರಸ್ತೆಗೆ ಟರ್ನ್ ಆಗುವಾಗ ಸಂಗಮೇಶ್ ಆಯತಪ್ಪಿ ಬಿದ್ದಿದ್ದಾನೆ.
ಈ ವೇಳೆ ಕಾಲು ನೆಲಕ್ಕೆ ತಗುಲಿ ಬೆಬ್ಬರಳು ತುಂಡಾಗಿದೆ. ಗಾಯಗೊಂಡ ವಿದ್ಯಾರ್ಥಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.