ವಿಜಯಸಾಕ್ಷಿ ಸುದ್ದಿ, ಗದಗ
ಬೈಕ್ ನಲ್ಲಿ ಹೊಲಕ್ಕೆ ಹೊರಟಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ನಡೆದಿದೆ.
ಸಂಗನಗೌಡ ತಂದೆ ಮಲ್ಲನಗೌಡ ನಾಯ್ಕನೂರು(30) ಕೊಲೆಯಾದ ದುರ್ಧೈವಿ.
ಸೋಮವಾರ ಮಧ್ಯಾಹ್ನ ಬೈಕ್ ನಲ್ಲಿ ಹೊಲಕ್ಕೆ ಹೊರಟಾಗ ಗುರ್ಲಕಟ್ಟಿ ಗ್ರಾಮದ ಗ್ರಾಮ ಪಂಚಾಯತಿ ಸಮೀಪದಲ್ಲಿ ಅಡ್ಡಗಟ್ಟಿ ಸಂಗನಗೌಡನನ್ನು ಕೆಳಗೆ ಇಳಿಸಿ, ಈರಣ್ಣ ತಂದೆ ಉಮೇಶ್ ಅಂತಕ್ಕನವರ್, ಚಂದ್ರುಗೌಡ ತಂದೆ ಈರನಗೌಡ ಪಾಟೀಲ್, ಮಹೇಶ್ ಗೌಡ ತಂದೆ ಕಲ್ಲನಗೌಡ ಪಾಟೀಲ್, ಎಂಬುವವರು ಕೊಲೆಗೀಡಾದ ಸಂಗನಗೌಡನ ಕೈ ಹಿಡಿದುಕೊಂಡಾಗ ಇನ್ನೊಬ್ಬ ಸುರೇಶಗೌಡ ತಂದೆ ಕಲ್ಲನಗೌಡ ಪಾಟೀಲ್ ಎಂಬಾತ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ಇರಿದಿದ್ದಾನೆ. ಇದರಿಂದಾಗಿ ಸಂಗನಗೌಡ ಮೃತಪಟ್ಟಿದ್ದಾನೆ.
ಮೃತನ ಪತ್ನಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 150/2022 ಕಲಂ 341, 302, 504, ಹಾಗೂ 34 ಐಪಿಸಿ ಪ್ರಕಾರ ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.