ಏಕಾಏಕಿ ಕಾರಿಗೆ ಬೆಂಕಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಕುಟುಂಬ

0
Spread the love

ಗದಗ: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕಾರು ಸುಟ್ಟು ಕರಕಲಾಗಿರುವ ಘಟನೆ ಗದಗ ತಾಲೂಕಿನ ನಾರಾಯಣಪೂರ ಗ್ರಾಮದ ಬಳಿ ನಡೆದಿದೆ. ಡಿ ಆರ್ ಪೊಲೀಸ್ ಸಿಬ್ಬಂದಿ ಈರಣ್ಣ ಜಾಲಿಹಾಳ ಅವರಿಗೆ ಸೇರಿದ್ದ ಕಾರಾಗಿದ್ದು,

Advertisement

ಬೆಂಕಿ ಹತ್ತಿದ ಕೂಡಲೇ ಕಾರಿನಿಂದ ಇಳಿದು ಬಚಾವ್‌ ಆಗಿದ್ದಾರೆ. ಪತಿ ಈರಣ್ಣ, ಪತ್ನಿ ಹಾಗೂ ಇಬ್ಬರು ಮಕ್ಕಳು ಬಚಾವ್ ಆಗಿದ್ದು, ಕಾರು ನೋಡು ನೋಡುತ್ತಿದ್ದಂತೆ ಸುಟ್ಟ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ


Spread the love

LEAVE A REPLY

Please enter your comment!
Please enter your name here