ಕೊಡಗು: ಸಿನಿಮೀಯ ರೀತಿಯಲ್ಲಿ ಕಾರೊಂದು ನದಿಗುರುಳಿದ ಘಟನೆ ಕೊಡಗು ಜಿಲ್ಲೆಯಲ್ಲಿ ಜರುಗಿದೆ. ಘಟನೆಯಲ್ಲಿ ಪವಾಡ ಎಂಬಂತೆ ಕಾರಿನಲ್ಲಿದ್ದ ಐವರು ಸಿನೀಮಿಯ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
Advertisement
ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಈ ಘಟನೆ ಜರುಗಿದೆ. ಲಕ್ಷ್ಮಣ ತೀರ್ಥ ನದಿಗೆ ಮುಂಜಾನೆ 3 ಗಂಟೆಗೆ ಕಾರು ಬಿದ್ದಿದೆ. ಬೆಂಗಳೂರಿನಿಂದ ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಕಾರು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಐವರು ಸೇಫ್ ಆಗಿದ್ದಾರೆ.