ಕಾರಿನ ಪಾರ್ಕಿಂಗ್ ಕಿರಿಕ್: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ!

0
Spread the love

ನೆಲಮಂಗಲ: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ ನಡೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕುಪ್ಪ ಗ್ರಾಮ ಪಂಚಾಯತಿ ಬಳಿ ಜರುಗಿದೆ. ಕಾರಿನ ಪಾರ್ಕಿಂಗ್ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 17 ವರ್ಷದ ರೆಹಮಾನ್ ಕೊಲೆಯಾದ ಯುವಕ ಎನ್ನಲಾಗಿದೆ.

Advertisement

ರೇಣುಕಾ ಹಾಗೂ ಪರ್ಮಿ ಎಂಬ ಯುವಕರಿಂದ ಕೊಲೆ ಆರೋಪ ಮಾಡಲಾಗಿದೆ. ರೆಹಮಾನ್ ಹುಟ್ಟು ಹಬ್ಬದ ದಿನ ಕಾರು ಪಾರ್ಕಿಂಗ್ ವಿಚಾರದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆದಿದೆ. ಸಂಚು ಹಾಕಿ ಮತ್ತೊಂದು ದಿನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಕಾರಿನಲ್ಲಿ ಚಾಕು ಹಾಗೂ ಪಿಸ್ತೂಲ್ ಬಳಸಿದ್ದ ಬಗ್ಗೆ ಸ್ಥಳೀಯರು ಆರೋಪಿಸಿದ್ದರು. ರಹಮಾನ್ ವೆಲ್ಡಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ಇದೀಗ ರೇಣುಕಾ ಕೊಲೆ ಮಾಡಿದ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here