ಗದಗ ನಗರದ ವಾರ್ಡ್ ನಂ. 18ರ ಗಂಗಾಪೂರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ಹಿಂಭಾಗದ ಸಿಸಿ. ರಸ್ತೆ ಕಾಮಗಾರಿಗೆ ಯುವ ಮುಖಂಡ ಕೃಷ್ಣಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಾಡ್ನ ನಗರಸಭೆ ಸದಸ್ಯರಾದ ಜೂನ್ಸಾಬ್ ನಮಾಜಿ, ಓಣಿಯ ಹಿರಿಯರಾದ ಬಸವರಾಜ ಕವಳಿಕಾಯಿ, ಮೋಹನ ಇಮರಾಪೂರ, ದೇವೇಂದ್ರ ಬಡಿಗೇರ, ಮುತ್ತು ಜಡಿ, ಮಲ್ಲೇಶ ಬಿಂಗಿ, ಫಕ್ಕೀರಪ್ಪ ಕೊರ್ಲಹಳ್ಳಿ, ಸುಲೇಮಾನ ಧಾರವಾಡ, ಚಂದ್ರು ಹಾಳಕೇರಿ, ಮಂಜು ಜಡಿ, ಯೂಸೂಪ ನಮಾಜಿ,ಹೀರಾಲಾಲ ಸಿಂಗ್ರಿ ಮುಂತಾದವರಿದ್ದರು.
Trending Now



