ವಿಜಯಸಾಕ್ಷಿ ಸುದ್ದಿ, ಗದಗ: ಸುಣಗಾರ ಓಣಿಯಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಯಿತು.
Advertisement
ಸಭೆಯ ಅದ್ಯಕ್ಷತೆಯನ್ನ ಸಮಾಜ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಸರ್ವರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮೀನುಗಾರರ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ, ಅಮಿತ ಪೂಜಾರ, ಬಸವರಾಜ ಗುಡಿಸಾಗರ, ಮಹಿಳಾ ಅಧ್ಯಕ್ಷೆ ಸುಜಾತ ಗುಡಿಸಾಗರ, ಗಿರಿಜಾ ಬಾರಕೇರ, ಕವಿತಾ ಗುಡಿಸಾಗರ, ರವಿಕುಮಾರ ಗುಡಿಸಾಗರ, ರಾಜೂ ಪೂಜಾರ, ಮಧು ಪೂಜಾರ, ಮಂಜುನಾಥ ಗುಡಿಸಾಗರ, ಸುನೀಲ ಬಾರಕೇರ, ಮುತ್ತು ಲಕ್ಕುಂಡಿ, ಹನಮಂತ ಸುಣಗಾರ, ಮಹಾಂತೇಶ ಬಾರಕೇರ ಸೇರಿದಂತೆ ಯುವಕರು ಹಾಗೂ ಹಿರಿಯರು ಭಾಗವಹಿಸಿದ್ದರು.