ವಿಜಯಸಾಕ್ಷಿ ಸುದ್ದಿ: ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಬುಧವಾರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹಾಗೂ ಶಿಗ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಆದೇಶ ಹುಲಗೂರ, ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಸಾಮಾಜಿಕ ಪ್ರಗತಿಯಲ್ಲಿ ದಾಸಿಮಯ್ಯನವರ ಕೊಡುಗೆ ಅಪಾರವಾಗಿದೆ. ದಾಸಿಮಯ್ಯನವರನ್ನು ಕೇವಲ ಒಂದು ಜಾತಿ, ಜನಾಂಗಕ್ಕೆ ಸೀಮಿತಗೊಳಿಸದೇ ಅವರ ವಚನಗಳಲ್ಲಿನ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ವಿಷ್ಣುಪ್ಪ ಪುಟ್ಟಪ್ಪನವರ, ಬಾಲಚಂದ್ರ ಜನಿವಾರದ, ಬಸಪ್ಪ ಮೂಲಿಮನಿ, ಶಿವಾನಂದ ಮುದಗಲ್ಲ, ಚಂದ್ರು ಮೂಲಿಮನಿ, ಕೃಷ್ಣ ಬಿದರಹಳ್ಳಿ, ಶಂಕಪ್ಪ ಕಳ್ಳಿ, ಆದೇಶ ಹುಲಗೂರ, ವೀರಪ್ಪಣ್ಣ ಮೂಲಿಮನಿ, ಪ್ರಕಾಶ ಬೆಟಗೇರಿ, ಪ್ರವೀಣ ಹುಲಗೂರ, ಅಂಬರೀಶ ಹುಲಗೂರ, ಪರಮೇಶ್ವರ ಕರ್ಜಗಿ, ರಾಘವೇಂದ್ರ ಅಸುಂಡಿ, ಆನಂದ ಮುಗದಲ್ಲ, ಗ್ರಾ.ಪಂ ಸದಸ್ಯರಾದ ಸಂತೋಷ ತಾಂದಳೆ, ಸಿದ್ದರಾಮಸ್ವಾಮಿ ಪೂಜಾರ ಸೇರಿದಂತೆ ದೇವಾಂಗ ಸಮಾಜದ ಹಿರಿಯರು ಉಪಸ್ಥಿತರಿದ್ದರು.